Advertisement

Leopard: ರೈತನ ಮೇಲೆ ಚಿರತೆ ದಾಳಿ… ಸಾಕು ನಾಯಿಗಳಿಂದ ರೈತನ ರಕ್ಷಣೆ

01:33 PM Mar 11, 2024 | Team Udayavani |

ದಾಂಡೇಲಿ : ರೈತನೊರ್ವ ಹೊಲಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಏಕಏಕಿ ಚಿರತೆಯೊಂದು ದಾಳಿ ಮಾಡಿ ಗಾಯಗೊಳಿಸಿದ ಘಟನೆ ತಾಲೂಕಿನ ಬಡಕಾನಶಿರಡಾ ಗ್ರಾಮದಲ್ಲಿ ಸೋಮವಾರ ನಡೆದಿದೆ.

Advertisement

ಬಡಕಾನಶಿರಡಾ ಗ್ರಾಮದ ಸಂತೋಷ್ ವಿಠ್ಠೋಬ ಬಾಮಣವಾಡ್ಕರ್ ಎಂಬವರೇ ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಇವರು ಎಂದಿನಂತೆ ಹೊಲಕ್ಕೆ ಹೋಗುತ್ತಿರುವಾಗ ಏಕಾಏಕಿ ಚಿರಾತೆಯೊಂದು ದಾಳಿ ಮಾಡಿದೆ. ಚಿರತೆಯ ದಾಳಿಗೊಳಗಾದ ಸಂದರ್ಭದಲ್ಲಿ ಅಲ್ಲೇ ಇದ್ದ ಅವರ ಸಾಕು ನಾಯಿಗಳು ಚಿರತೆಯನ್ನು ಅಟ್ಟಿಸಿ, ಅವರನ್ನು ರಕ್ಷಿಸಿದೆ.

ಸಂತೋಷ್ ವಿಠ್ಠೋಬ ಬಾಮಣವಾಡ್ಕರ್ ಅವರನ್ನು ತಕ್ಷಣವೇ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿದೆ. ಸ್ಥಳಕ್ಕೆ ದಾಂಡೇಲಪ್ಪ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ವ್ಯವಸ್ಥಾಪಕರಾದ ಕೃಷ್ಣ ಪೂಜಾರಿ‌ ಅವರು ಸೇರಿದಂತೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.

ಇದನ್ನೂ ಓದಿ: Loksabha; ನಾನು, ಮಗ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ: ಪ್ರಕಾಶ್ ಹುಕ್ಕೇರಿ ಸ್ಪಷ್ಟನೆ

Advertisement

Udayavani is now on Telegram. Click here to join our channel and stay updated with the latest news.

Next