Advertisement

ಹುಣಸೂರು: ಅಯ್ಯಪ್ಪ ಸ್ವಾಮಿ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ ; ಆತಂಕದಲ್ಲಿ ಜನರು

12:29 PM Jul 18, 2022 | Team Udayavani |

ಹುಣಸೂರು: ನಗರದ  ಅಯ್ಯಪ್ಪಸ್ವಾಮಿ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಜನ ಭಯಭೀತರಾಗಿದ್ದಾರೆ.

Advertisement

ಶನಿವಾರ ಹಗಲು ವೇಳೆಯೇ ಚಿರತೆ ಕಾಣಿಸಿಕೊಂಡಿರುವುದನ್ನು ಬಡಾವಣೆಯ ಯುವಕರು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ.

ಹುಣಸೂರು- ಮಡಿಕೇರಿ ಹೆದ್ದಾರಿ ಬದಿಯ ಅಯ್ಯಪ್ಪಸ್ವಾಮಿ ಬೆಟ್ಟದಲ್ಲಿ ದೊಡ್ಡ ಗಾತ್ರದ ಚಿರತೆ ಕಾಣಿಸಿಕೊಂಡಿದ್ದು, ಬೆಟ್ಟದ ಒಂದು ಬದಿಯಲ್ಲಿ ಕೃಷಿ ಭೂಮಿ ಇದೆ. ಮತ್ತೊಂದು ಬದಿಯಲ್ಲಿ ಜನವಸತಿ ಪ್ರದೇಶವಾದ ಹೌಸಿಂಗ್ ಬೋಡ್ ಕಾಲೋನಿ. ಮೂರೂರಮ್ಮ ಬಡಾವಣೆ ಇದ್ದು, ಹಗಲಿನ ವೇಳೆಯೇ ಚಿರತೆ ಕಾಣಿಸಿಕೊಂಡಿದ್ದರಿಂದ ಕೃಷಿ ಚಟುವಟಿಕೆಗೆ ತೆರಳಲು ಜನ ಹೆದರುತ್ತಿದ್ದಾರೆ.

ಮತ್ತೊಂದೆಡೆ ಬೆಟ್ಟದ ತಪ್ಪಲಿಗಂಟಿಕೊಂಡಿರುವ ಮೂರೂರಮ್ಮ ಬಡಾವಣೆ ಜನರು ಸಂಜೆಯಾಯಿತೆಂದರೆ ಮನೆಯಿಂದ ಹೊರಬರದಂತಾಗಿದ್ದು, ಚಿರತೆಯನ್ನು ಸೆರೆ ಹಿಡಿಯುವಂತೆ ಬಡಾವಣೆ ನಿವಾಸಿಗಳು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next