Advertisement

ಬಾವಿಗೆ ಬಿದ್ದ ಚಿರತೆ: ರಕ್ಷಣಾ ಕಾರ್ಯ ನೋಡಲು ಮುಗಿಬಿದ್ದ ಜನ

11:50 AM Jun 25, 2019 | keerthan |

ಬೆಳ್ತಂಗಡಿ: ತಾಲೂಕಿನ ನಡ ಗ್ರಾಮದ ಮುರ ಪಾದೆ ಸಮೀಪ ಗಂಗಯ್ಯ ಗೌಡ ಎಂಬುವರ ಮನೆ ಬಾವಿಗೆ ಚಿರತೆ ಬಿದ್ದ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

Advertisement

ಮನೆ ಮಂದಿ ಬಾವಿ ಸಮೀಪ ತೆರಳಿದಾಗ ಚಿರತೆ ಬಾವಿಯಲ್ಲಿ ಬಿದ್ದಿದ್ದು, ಬಾವಿಯ ದಂಡೆಯಲ್ಲಿ ಸಿಲುಕಿಕೊಂಡಿದೆ. ನಿನ್ನೆ ರಾತ್ರಿ ಬಾವಿಗೆ ಬಿದ್ದಿರುವ ಶಂಖೆ ವ್ಯಕ್ತವಾಗಿದೆ.

ಮಂಗಳೂರು ಹಾಗೂ ಕಾರ್ಕಳ ಅರಣ್ಯ ಇಲಾಖೆಯಿಂದ ಗೇಜ್ ತರಿಸಲಾಗುತ್ತಿದೆ. ಚಿರತೆ ಬಾವಿಗೆ ಬಿದ್ದಿರುವುದನ್ನು ನೋಡಲು ಜನ ಸ್ಥಳದಲ್ಲಿ ಜಮಾಯಿಸಿದ್ದಾರೆ.

ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ಸುಬ್ಬಯ್ಯ ನಾಯ್ಕ್, ಉಪ ವಲಯ ಅರಣ್ಯಾಧಿಕಾರಿ ರಾಜೇಶ್, ವಿನೋದ್ ಗೌಡ, ವನ್ಯ ಜೀವಿ ವಲಯ ಉ.ವ.ಅರಣ್ಯಾಧಿಕಾರಿ ಪ್ರದೀಪ್, ಅರಣ್ಯ ರಕ್ಷಕರಾದ ಆನಂದ ಮೂರ್ತಿ, ರಾಘವೇಂದ್ರ ಉಲ್ಲಾಸ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next