Advertisement

ಅಟ್ಟಿಸಿಕೊಂಡು ಬೈಕ್‌ ಸವಾರನ ಮೇಲೆ ದಾಳಿ ಮಾಡಿದ ಚಿರತೆ

10:20 AM Mar 09, 2020 | sudhir |

ಕೊಪ್ಪ: ತಾಲೂಕಿನ ಶಾನುವಳ್ಳಿ ಸಮೀಪದ ತೋಟಕ್ಕೆ ಬೈಕ್‌ನಲ್ಲಿ ಚಲಿಸುತ್ತಿದ್ದ ಯುವಕನ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಭಾನುವಾರ ಬೆಳಗ್ಗೆ 6.30ರ ಸುಮಾರು ನಡೆದಿದೆ.

Advertisement

ಶಾನುವಳ್ಳಿಯ ನಿವಾಸಿ ಮುಖೇಶ್‌ ಗಾಯಾಳು. ಮುಖೇಶ್‌ ತಮ್ಮ ತೋಟಕ್ಕೆ ಬೆಳಗ್ಗೆ ಬೈಕ್‌ನಲ್ಲಿ ತೆರಳುತಿದ್ದ ವೇಳೆಯಲ್ಲಿ ಚಿರತೆ ಸುಮಾರು ಒಂದು ಕಿ.ಮೀ ಅಟ್ಟಿಸಿಕೊಂಡು ಬಂದು ದಾಳಿ ನಡೆಸಿದೆ. ಯುವಕ ಕಾಲಿನ ಭಾಗಕ್ಕೆ ಪೆಟ್ಟಾಗಿದ್ದು, ಕೊಪ್ಪದ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಶೃಂಗೇರಿ ಆರ್‌.ಎಫ್‌ ಸುಬ್ರಮಣ್ಯ, ಬಾಳೆಹೊನ್ನೂರು ಎ.ಸಿ.ಎಫ್‌ ಸತೀಶ್‌ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next