Advertisement

Gadaga: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಚಿರತೆ ದಾಳಿ

01:06 PM Feb 07, 2024 | Team Udayavani |

ಗದಗ:  ಜಮೀನಿನಲ್ಲಿ ಬಾಳೆಗೋಣಿ ಕತ್ತರಿಸುವಾಗ ಯುವಕನ ಮೇಲೆ ಚಿರತೆಯೊಂದು ದಾಳಿ ಮಾಡಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ಸಮೀಪದ ಜೀಗೇರಿ ಗ್ರಾಮದಲ್ಲಿ ನಡೆದಿದೆ.

Advertisement

ಜೀಗೇರಿ ಗ್ರಾಮದ ಉದಯ ಶರಣಪ್ಪ ನಿಡಶೇಸಿ (18) ಚಿರತೆ ದಾಳಿಗೆ ಒಳಗಾದ ಯುವಕ. ಉದಯ ಶರಣಪ್ಪ ಜಮೀನಿನಲ್ಲಿ ಬಾಳೆಗೋಣಿ ಕತ್ತರಿಸುವ ವೇಳೆ ಚಿರತೆ ಯುವಕನ ಮೇಲೆ ದಾಳಿ ಮಾಡಿದೆ. ಯುವಕನ ಎದೆಗೆ ಬಾಯಿ ಹಾಕಿ, ಮೈ ಹಾಗೂ ಬೆನ್ನಿನ ಮೇಲೆ ಊಗುರಿನಿಂದ ದಾಳಿ ಮಾಡಿದೆ.

ಚಿರತೆಯ ದಾಳಿಯಿಂದ ಅಕ್ಕಪಕ್ಕದಲ್ಲಿದ್ದ ಉಳಿದ ಕಾರ್ಮಿಕರು ಕೂಗಾಡಿದ್ದಾರೆ. ಇದರಿಂದ ಚಿರತೆ ಭೀತಿಯಿಂದ ಓಡಿದೆ. ಕೂದಲೆಳೆಯಲ್ಲಿ ಪಾರಾದ ಯುವಕನನ್ನು ಗಜೇಂದ್ರಗಡ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ಉಪ ವಲಯ ಅರಣ್ಯಧಿಕಾರಿ ಪ್ರವೀಣಕುಮಾರ ಸಾಸಿವಹಳ್ಳಿ ಭೇಟಿ ನೀಡಿ ಯುವಕನ ಆರೋಗ್ಯ ವಿಚಾರಿಸಿದ್ದಾರೆ.

ಜೀಗೇರಿ ಗ್ರಾಮದ ಯಲ್ಲಪ್ಪ ಕಾಡಾದ ಅವರ ಜಮೀನಿನಲ್ಲಿ 5 ದಿನದ ಹಿಂದೆಯೇ ಅರಣ್ಯ ಇಲಾಖೆ ಅವರು ಒಂದು ಬೋನ್‌ ಇಟ್ಟಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next