Advertisement

ಬೆಳಗಾವಿ ನಗರದಲ್ಲಿ ಚಿರತೆ ದಾಳಿಗೆ ಬೆಚ್ಚಿದ ಜನ; ಮನೆಯಿಂದ ಹೊರಬರದಂತೆ ಸೂಚನೆ

03:55 PM Aug 05, 2022 | Team Udayavani |

ಬೆಳಗಾವಿ: ನಗರದಲ್ಲಿ ಚಿರತೆಯೊಂದು ದಾಳಿ ಮಾಡಿದ್ದು, ಜನತೆ ಬೆಚ್ಚಿ ಬಿದ್ದಿದ್ದಾರೆ.

Advertisement

ಬೆಳಗಾವಿಯ ಜಾಧವ್ ನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಚಿರತೆಯ ಚಲನ ವಲನ ಜಾಧವ್ ನಗರದಲ್ಲಿರುವ ಯಶೋಧನ್ ಜಾಧವ್ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಚಿರತೆ ದಾಳಿಯಿಂದ ಕಟ್ಟಡ ಕಾರ್ಮಿಕನಿಗೆ ಸಣ್ಣಪುಟ್ಟ ಗಾಯವಾಗಿದೆ. ಗಾಯಗೊಂಡ ಕಾರ್ಮಿಕನನ್ನು ಖನಗಾವಿ ನಿವಾಸಿ ಸಿದರಾಯಿ ಲಕ್ಷ್ಮಣ ಮಿರಜಕರ (38) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:ಸರ್ಕಾರ ತನ್ನತನ ಅಡವಿಟ್ಟು‌ ಹಿಂದಿಗೆ ಸಂಪೂರ್ಣ ಶರಣಾಗಿದೆ : ಸಿದ್ದರಾಮಯ್ಯ ಕಿಡಿ

ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಠಿಕಾಣಿ ಹೂಡಿದ್ದು, ಚಿರತೆಯನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಮನೆಯಿಂದ ಹೊರ ಬರದಂತೆ ಸಾರ್ವಜನಿಕರಿಗೆ ಎಪಿಎಂಸಿ ಠಾಣೆ ಪೊಲೀಸರು ಎಚ್ಚರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next