Advertisement

Sirsi: ಜಿಂಕೆಯನ್ನು ಬೇಟೆಯಾಡಿದ ಚಿರತೆ… ಆತಂಕದಲ್ಲಿ ಸ್ಥಳೀಯರು

12:08 PM Nov 15, 2023 | Team Udayavani |

ಶಿರಸಿ: ತಾಲೂಕಿನ ಎಕ್ಕಂಬಿ ಅರಣ್ಯ ವ್ಯಾಪ್ತಿಗೆ ಬರುವ ಮಳಲಗಾಂವನಲ್ಲಿ ಜಿಂಕೆಯೊಂದನ್ನು ಚಿರತೆಯೊಂದು ಬೇಟೆಯಾಡಿ ಕೊಂದ ಘಟನೆ ನಡೆದಿದೆ.

Advertisement

ಮಳಲಗಾಂವ್ ಹನುಮಂತ ಚಾಯಾ ನಾಯ್ಕ ಇವರ ಮನೆಯ ಹಿತ್ತಲಿನ ಕಾಡಿನಲ್ಲಿ ಬುಧವಾರ ಬೆಳಗಿನ ಜಾವ ಘಟನೆ ನಡೆದಿದೆ. ಬೆಳಗ್ಗೆ ಸುಮಾರು ನಾಲ್ಕು ಗಂಟೆಗೆ ಮನೆಯ ಹಿತ್ತಲಲ್ಲಿ ಚಿರತೆಯ ಘರ್ಜನೆ ಕೇಳಿ ಹೊರಗೆ ಬಂದು ನೋಡುವಾಗಲೇ ಜಿಂಕೆ ಬಿಟ್ಟು ಓಡಿದೆ. ಬೃಹತ್ ಗಾತ್ರದ ಜಿಂಕೆ ಬೇಟೆಯಾಡಿದ ಚಿರತೆಯ ಕುರಿತು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅರಣ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: Video: ಕಾರಿನಲ್ಲಿ ಬಂದು ಮನೆಯ ಮುಂದಿದ್ದ ಹೂವಿನ ಕುಂಡವನ್ನು ಎಗರಿಸಿದ ಮಹಿಳೆಯರು

Advertisement

Udayavani is now on Telegram. Click here to join our channel and stay updated with the latest news.

Next