Advertisement

Leopard attack: ನಯನಾಡು; ಚಿರತೆ ದಾಳಿಗೆ ಕರು ಬಲಿ

04:35 PM Dec 20, 2023 | Team Udayavani |

ಪುಂಜಾಲಕಟ್ಟೆ: ಚಿರತೆಯೊಂದು ಹಟ್ಟಿಯಲ್ಲಿದ್ದ ಕರುವಿನ ಮೇಲೆ ದಾಳಿ ನಡೆಸಿ ಕೊಂದು ತಿಂದು ಹಾಕಿದ ಘಟನೆ ಬುಧವಾರ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ನಯನಾಡು ಎಂಬಲ್ಲಿ ಸಂಭವಿಸಿದೆ.

Advertisement

ಇಲ್ಲಿನ ವಿಟ್ಠಲ ಶೆಟ್ಟಿ ಎಂಬವರ ಮನೆಯ ಸಮೀಪದಲ್ಲಿರುವ ಹಟ್ಟಿಯಲ್ಲಿ ಈ  6 ತಿಂಗಳ ಕರುವನ್ನು ಕಟ್ಟಿಹಾಕಲಾಗಿತ್ತು. ಮಧ್ಯರಾತ್ರಿ ವೇಳೆ ಚಿರತೆ ದಾಳಿ ಮಾಡಿ ಕರುವನ್ನು ಹಟ್ಟಿಯಿಂದ ಸುಮಾರು 50 ಮೀ.ದೂರದ ಅಡಿಕೆ ತೋಟಕ್ಕೆ ಎಳೆದುಕೊಂಡು ಹೋಗಿ ಕೊಂದು ಬಳಿಕ ತಿಂದಿದೆ.

ಈ ಹೊತ್ತಿನಲ್ಲಿ ನಾಯಿಗಳ ಬೊಗಳಿಕೆ ಕೇಳಿದೆಯಾದರೂ ಚಿರತೆಯ ಬಗ್ಗೆ ಯೋಚನೆ ಮಾಡಿರಲಿಲ್ಲ. ಇದುವರೆಗೆ ಈ ಪರಿಸರದಲ್ಲಿ ಚಿರತೆ ಹಾವಳಿ ಇರಲಿಲ್ಲ , ಇದೀಗ ಘಟನೆಯಿಂದ ಪರಿಸರದಲ್ಲಿ ಆತಂಕ ಉಂಟಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಅರಣ್ಯ ಇಲಾಖೆ ಹಾಗೂ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next