Advertisement

ಕೊರ್ಗಿ : ಚಿರತೆ ದಾಳಿಗೆ ಹಸು ಬಲಿ

02:58 PM Jul 26, 2020 | sudhir |

ತೆಕ್ಕಟ್ಟೆ : ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಚಾರುಕೊಟ್ಟಿಗೆ ಸೆಳ್ಳೆಮುಂಡು ಎಂಬಲ್ಲಿ ಜು.25 ರಂದು ಚಿರತೆ ದಾಳಿಗೆ ಹಸು ಬಲಿಯಾದ ಘಟನೆ ಸಂಭವಿಸಿದೆ.

Advertisement

ಇಲ್ಲಿನ ಗಿರಿಜಾ ಪೂಜಾರಿ ಅವರು ಎಂದಿನಂತೆ ತನ್ನ ಹಸುವನ್ನು ಮೇಯಲು ಬಿಟ್ಟಿದ್ದು ಸಂಜೆಯಾದರೂ ಕೂಡಾ ಮನೆಗೆ ಹಿಂದಿರುಗಿ ಬಾರದ ಹಿನ್ನೆಲೆಯಲ್ಲಿ ಪರಿಸರದಲ್ಲಿ ಹುಡುಕಾಟ ನಡೆಸಿದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ.

ಈಗಾಗಲೇ ಇಲ್ಲಿನ ಸುತ್ತಮುತ್ತಲಿನ ಪರಿಸರದಲ್ಲಿ ಚಿರತೆ ಸಂಚಾರಗಳಿದ್ದು ಪರಿಸರದ ಮಂದಿ ಆತಂಕದ ನಡುವೆ ಸಂಚರಿಸಬೇಕಾದ ಅನಿವಾರ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next