Advertisement

ವಿಧಾನಸಭೆಯಲ್ಲಿ ಭಾಷಣ ಮಾಡುವಾಗ ಜಾರಿದ ಸಿದ್ದರಾಮಯ್ಯ ಪಂಚೆ

08:18 PM Sep 22, 2021 | Team Udayavani |

ಬೆಂಗಳೂರು: ಮೈಸೂರಿನಲ್ಲಿ ನಡೆದಿದ್ದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂಬಂಧ ಗಂಭೀರ ಚರ್ಚೆಯಲ್ಲಿ ತೊಡಗಿಕೊಂಡಿದ್ದಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪಂಚೆ ಸಡಿಲವಾದ ಪ್ರಸಂಗ ನಡೆಯಿತು.

Advertisement

ಸಿದ್ದರಾಮಯ್ಯ ಅವರು ವಕೀಲನ ಮಾದರಿಯಲ್ಲಿ ಗೃಹ ಸಚಿವರತ್ತ ಒಂದೊಂದೇ ಮಾತಿನ ಬಾಣಗಳನ್ನು ಬಿಡುತ್ತಿದ್ದರು. ಆಗ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಸಿದ್ದರಾಮಯ್ಯ ಬಳಿಗೆ “ಪಂಚೆ ಕಳಚಿದೆ’ ಎಂದು ಮೆಲ್ಲನೆ ಕಿವಿಯಲ್ಲಿ ಉಸುರಿದರು. ಕೂಡಲೇ ಕುಳಿತುಕೊಂಡ ಸಿದ್ದರಾಮಯ್ಯ ಪಂಚೆಯನ್ನು ಬಿಗಿದುಕೊಳ್ಳುತ್ತಾ “ಪಂಚೆ ಸ್ವಲ್ಪ ಬಿಚ್ಚಿ ಹೋಗಿದೆ ಈಶ್ವರಪ್ಪ’ ಎಂದು ನಗುತ್ತಾ ಹೇಳಿದ್ದು, ಇಡೀ ಸದನ ನಗೆಗಡಲಾಯಿತು.

ಆಗ ಹಿಂದಿನ ಸಾಲಿನಲ್ಲಿದ್ದ ರಮೇಶ್‌ ಕುಮಾರ್‌ ಅವರು ಎದ್ದುನಿಂತು, “ಏನೋ, ನಮ್ಮ ಪಕ್ಷದ ಅಧ್ಯಕ್ಷರು ಪಕ್ಷದ ಮಾನ ಹೋಗುತ್ತದೆ ಅಂತ ಗುಟ್ಟಾಗಿ ವಿಷಯ ತಿಳಿಸಿದ್ರೆ ಇವರು ಜೋರಾಗಿ ಹೇಳುತ್ತಾರಲ್ಲ ಎಂದು ನಗುತ್ತಾ ಹೇಳಿದರು. ಸಿದ್ದರಾಮಯ್ಯ ಪಂಚೆ ಸರಿ ಮಾಡುತ್ತಲೇ ಎದ್ದುನಿಂತು, “ಕೋವಿಡ್ ಬಂದ ಮೇಲೆ, ನನ್ನ ತೂಕ ಹೆಚ್ಚಾಗಿದೆ. ಹೊಟ್ಟೆ ಬೆಳೆದಿದೆ. ಹಾಗಾಗಿ ಪಂಚೆ ಸರಿಯಾಗಿ ಕಟ್ಟಲಾಗುತ್ತಿಲ್ಲ’ ಎಂದು ಹೇಳುತ್ತಾ ಸರಕಾರದ ಮೇಲಿನ ಮಾತಿನ ದಾಳಿಯನ್ನು ಮುಂದುವರಿಸಿದರು.

ಇದನ್ನೂ ಓದಿ:ಕಾಫಿಗೂ ಬಂತು ಸ್ನಾತಕೋತ್ತರ ಪದವಿ! ಇಟಲಿಯ  ಫ್ಲಾರೆನ್ಸ್‌ ವಿವಿಯಲ್ಲಿ 9 ತಿಂಗಳ ಕೋರ್ಸ್‌

ವಿಶೇಷವೆಂದರೆ, ಸದನ ಊಟದ ವಿರಾಮಕ್ಕೆ ತೆರಳುತ್ತಿದ್ದಾಗಲೂ ಸಿದ್ದರಾಮಯ್ಯನವರ ಪಂಚೆ ಮತ್ತೆ ಸಡಿಲವಾಗಿತ್ತು. ಕೆಲವು ಸದಸ್ಯರು ಇದನ್ನು ಸಿದ್ದರಾಮಯ್ಯರ ಗಮನಕ್ಕೆ ತಂದರು. ಮತ್ತೆ ಪಂಚೆ ಸರಿ ಮಾಡಿಕೊಂಡ ಸಿದ್ದರಾಮಯ್ಯ, “ನನಗೆ ವಯಸ್ಸಾಯ್ತು, ನೀನು ನಗುತ್ತೀಯಲ್ಲ’ ಎಂದು ಹೇಳಿದರು. ಹಿಂದಿದ್ದ ಅವರ ಪುತ್ರ, ಶಾಸಕ ಯತೀಂದ್ರ ಅವರು “ಪಂಚೆಯನ್ನು ಸರಿ ಕಟ್ಟಿಕೊಳ್ಳಿ’ ಎನ್ನುತ್ತಿದ್ದರು. ಇನ್ನೊಬ್ಬರು ಬೆಲ್ಟ್ ಹಾಕಿಕೊಳ್ಳಿ ಅಂತ ಸಲಹೆ ನೀಡಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next