Advertisement

WFI ಅಮಾನತನ್ನು ಹಿಂಪಡೆಯದಿದ್ದರೆ ಕಾನೂನು ಸಮರ:ಸಂಜಯ್‌ ಸಿಂಗ್‌

12:10 AM Dec 29, 2023 | Team Udayavani |

ಹೊಸದಿಲ್ಲಿ: ನೂತನವಾಗಿ ಚುನಾಯಿತಗೊಂಡ ಭಾರತೀಯ ಕುಸ್ತಿ ಫೆಡರೇಶನ್‌ ಮೇಲಿನ ಅಮಾನತನ್ನು ಹಿಂಪಡೆಯದೇ ಹೋದರೆ ನಾವು ಕಾನೂನಿನ ಮೊರೆ ಹೋಗುವುದಾಗಿ, ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸಂಜಯ್‌ ಸಿಂಗ್‌ ಹೇಳಿದ್ದಾರೆ.

Advertisement

“ಕ್ರೀಡಾ ಸಚಿವಾಲಯವು ಸರಿಯಾದ ಕಾರ್ಯ ವಿಧಾನವನ್ನು ಅನುಸರಿಸಿಲ್ಲ. ಸ್ವಾಯತ್ತ ಮತ್ತು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಚುನಾಯಿತ ಸರಕಾರ ವನ್ನು ಅಮಾನತುಗೊಳಿಸಲು ಸಾಧ್ಯ ವಿಲ್ಲ. ನಾವು ಸರಕಾರದೊಂದಿಗೆ ಮಾತನಾಡಲಿದ್ದೇವೆ. ಅವರು ಅಮಾ ನತನ್ನು ಹಿಂದೆ ಪಡೆಯದೇ ಹೋದರೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗು ವುದು. ಮೂರು ಸದಸ್ಯರ ತಾತ್ಕಾಲಿಕ ಸಮಿತಿಯನ್ನು ನಾವು ಒಪ್ಪುವುದಿಲ್ಲ’ ಎಂಬುದಾಗಿ ಸಿಂಗ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next