Advertisement

ಕಾಯ್ದಿರಿಸಿದ ರೂಂ ಕ್ಯಾನ್ಸಲ್ ಮಾಡಿದ ಹೋಟೆಲ್ ವಿರುದ್ಧ ಕಾನೂನು ಸಮರ: ಡಿಕೆ ಶಿವಕುಮಾರ್

01:56 PM Jul 12, 2019 | Team Udayavani |

ಬೆಂಗಳೂರು: ನಾವು ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿಸಿಯೇ ಅಧಿಕೃತವಾಗಿ ಮುಂಬೈಗೆ ಹೋಗಿದ್ದು, ಹೋಟೆಲ್ ನ ರೂಂ ಬುಕ್ ಮಾಡಿದ್ದೇವು. ಆದರೆ ರೂಮ್ ಅನ್ನು ಕ್ಯಾನ್ಸಲ್ ಮಾಡಿ, ಹೋಟೆಲ್ ಒಳಗೆ ಹೋಗದಂತೆ ತಡೆಯಲಾಯಿತು. ಈ ಸಂಬಂಧ ನಾನು ಕಾನೂನು ಹೋರಾಟ ನಡೆಸಲು ಚಿಂತನೆ ನಡೆಸಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

Advertisement

ಗುರುವಾರ ಕೆಕೆ ಗೆಸ್ಟ್ ಹೌಸ್ ಬಳಿ ಸುದ್ದಿಗಾರರ ಜತೆ ಮಾತನಾಡಿದ ,ಅವರು ಹೋಟೆಲ್ ಆಡಳಿತ ಮಂಡಳಿ ಬುಕ್ ಮಾಡಿದ್ದ ರೂಂ ಅನ್ನು ಕ್ಯಾನ್ಸಲ್ ಮಾಡಿದ ಮೇಲೆ ಪೊಲೀಸರು ನನ್ನ ಬೆಂಗಳೂರಿಗೆ ಕಳುಹಿಸಿದ್ದರು.

ನಿನ್ನೆ ರಾತ್ರಿಯೇ ನಾನು ಬೆಂಗಳೂರು ತಲುಪಿದ್ದೇನೆ. ನಮ್ಮ ಶಾಸಕರನ್ನೂ ಭೇಟಿಯಾಗಲೂ ಅವಕಾಶ ಕೊಡಲಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ದೂರಿದರು.

ರಾಜೀನಾಮೆ ಸಲ್ಲಿಸಿ ಮುಂಬೈ ಹೋಟೆಲ್ ನಲ್ಲಿರುವ ಅತೃಪ್ತ ಶಾಸಕ ಮನವೊಲಿಕೆ ಮಾಡಲು ಹೋಗಿದ್ದ ಸಚಿವ ಡಿಕೆ ಶಿವಕುಮಾರ್ ಮುಂಬೈಗೆ ತೆರಳಿದ್ದ ಸಂದರ್ಭದಲ್ಲಿ ಹೈಡ್ರಾಮಾ ನಡೆದಿತ್ತು. ಶಾಸಕರನ್ನು ಮಾತನಾಡಿಸಲು ಅವಕಾಶ ನೀಡದ ಕಾರಣ 6ಗಂಟೆ ಪ್ರತಿಭಟನೆ ನಡೆಸಿ, ಬಳಿಕ ಪೊಲೀಸ್ ವಶಕ್ಕೆ ಒಳಗಾಗಿ ಕೊನೆಗೆ ಬೆಂಗಳೂರಿಗೆ ವಾಪಸ್ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next