Advertisement

ಅಮೂಲ್ಯ ಗಣಿಕೆ

07:08 PM Oct 08, 2019 | Lakshmi GovindaRaju |

ಗಣಿಕೆ, ಕಾಕಿ, ಕರಿಕಾಚಿ, ಕಾಶೀ ಸೊಪ್ಪು ಎಂಬೆಲ್ಲಾ ಹೆಸರಿನಿಂದ ಕರೆಸಿಕೊಳ್ಳುವ ಈ ಗಿಡ, ಹಿತ್ತಲಿನಲ್ಲಿ ತಾನಾಗಿಯೇ ಹುಟ್ಟಿಕೊಳ್ಳುತ್ತದೆ. ಸಾಮಾನ್ಯವಾಗಿ ಪೊದೆಯಂತೆ ಬೆಳೆಯುವ ಈ ಸಸ್ಯವನ್ನು ಮಳೆಗಾಲದಲ್ಲಿ ಹೇರಳವಾಗಿ ಕಾಣಬಹುದು. ಈ ಗಿಡದಲ್ಲಿ ಕಪ್ಪು ಮತ್ತು ಕೆಂಪು ಗಣಿಕೆ ಎಂಬ ಎರಡು ವಿಧಗಳಿವೆ.

Advertisement

ಎರಡೂ ಬಗೆಯ ಹಣ್ಣುಗಳು ರುಚಿಕರ. ಆದರೆ, ಕೆಂಪು ಗಣಿಕೆಯಲ್ಲಿ ಹೆಚ್ಚು ಔಷಧೀಯ ಗುಣವಿದೆ. ಬಿತ್ತದೆ ಬೆಳೆಯುವ ಈ ಸಸ್ಯ, ಜಾನುವಾರುಗಳಿಗೂ ಇಷ್ಟದ ಮೇವು. ಇದನ್ನು ಕಳೆ ಅಂತ ನಿರ್ಲಕ್ಷಿಸುವುದು ಸರಿಯಲ್ಲ. ಯಾಕಂದ್ರೆ, ಈ ಸೊಪ್ಪಿಗೆ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ.

-ಗಣಿಕೆ ಸೊಪ್ಪನ್ನು ಪಲ್ಯ ಮಾಡಿ ಸೇವಿಸಿದರೆ ಬಾಯಿಹುಣ್ಣು ಗುಣವಾಗುತ್ತದೆ.

-ಗಣಿಕೆಯ ಎಲೆಗಳು ಪಿತ್ತಹರವಷ್ಟೇ ಅಲ್ಲ, ರಕ್ತಶುದ್ಧಿಗೂ ಸಹಕಾರಿ. ದೇಹದಲ್ಲಿ ಪದೇಪದೆ ಕುರು ಆಗುತ್ತಿದ್ದರೆ, ಈ ಸೊಪ್ಪನ್ನು ಸೇವಿಸಿ.

-ಗಣಿಕೆ ಸೊಪ್ಪನ್ನು ಬೇಯಿಸಿ ತೆಗೆದ ರಸಕ್ಕೆ, ಅರಿಶಿನ ಬೆರೆಸಿ ಕುರುವಿಗೆ ಹಚ್ಚಿ. ಸೊಪ್ಪಿನ ರಸಕ್ಕೆ, ಶುಂಠಿ ರಸ ಹಾಗೂ ಜೇನುತುಪ್ಪ ಬೆರೆಸಿ ಕುಡಿದರೆ, ಶೀತ-ಕೆಮ್ಮು ಗುಣವಾಗುತ್ತದೆ

Advertisement

-ಚರ್ಮರೋಗಗಳಾದ ಇಸುಬು, ಕಜ್ಜಿ, ಸೋರಿಯಾಸಿಸ್‌ನಿಂದ ಬಳಲುತ್ತಿದ್ದರೆ ಗಣಿಕೆ ಹೂವಿನ ಕಷಾಯ ಕುಡಿಯಿರಿ.

-ಸೊಪ್ಪಿನ ರಸಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ಉರಿಮೂತ್ರ ನಿಲ್ಲುತ್ತದೆ.

-ಸರ್ಪಸುತ್ತು ಆಗಿದ್ದಲ್ಲಿ ಗಣಿಕೆ ಸೊಪ್ಪನ್ನು ಅರೆದು ಅರಿಸಿನ ಬೆರೆಸಿ ಹಚ್ಚಿ.

-ಕಪ್ಪು ಬಣ್ಣದ ಗಣಿಕೆ ಹಣ್ಣಿನ ಸೇವನೆಯೂ ಆರೋಗ್ಯಕ್ಕೆ ಒಳ್ಳೆಯದು.

-ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವವಾಗುತ್ತಿದ್ದರೆ, ಸೊಪ್ಪಿನ ರಸಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿ.

(ಆಕರ: “ಸೊಪ್ಪೇ ಸಂಪತ್ತು’ ಪುಸ್ತಕ. ಸಂಪಾದಕಿ: ಪಿ.ಚಂದ್ರಿಕಾ)

Advertisement

Udayavani is now on Telegram. Click here to join our channel and stay updated with the latest news.

Next