Advertisement
“ನಿಮ್ಮ (ಬಿಜೆಪಿ) ಸರ್ಕಾರದ ಐದು ವರ್ಷ ಅವಧಿಯಲ್ಲಿ ನೀರಾವರಿ ಖರ್ಚು ಮಾಡಿದ್ದು ಎಷ್ಟು, ನಮ್ಮ (ಕಾಂಗ್ರೆಸ್) ಸರ್ಕಾರದ ಅವಧಿಯಲ್ಲಿ ಖರ್ಚು ಮಾಡಲಾದ ಹಣ ಎಷ್ಟು ಎಂದು ಬಹಿರಂಗ ಚರ್ಚೆಗೆ ನಾನು ಸಿದ್ಧ. ತಾಕಿತ್ತದರೆ ಬನ್ನಿ ಎಂದು ಪಂಥಾಹ್ವಾನ ನೀಡಿದ ಸಿದ್ದರಾಮಯ್ಯ, “ಬರಲು ನಿಮಗೆ ದಮ್ಮು ಇಲ್ಲ ಬಿಡಿ’ ಎಂದೂ ಹೇಳಿದರು.
Related Articles
Advertisement
ಹಿಂದೆ 5 ವರ್ಷ ಅಧಿಕಾರದಲ್ಲಿದ್ದಾಗ ನೀರಾವರಿಗೆ ಖರ್ಚು ಮಾಡಲು ಯಾರಾದರೂ ಅವರ ಕೈ ಹಿಡಿದುಕೊಂಡಿದ್ದರಾ?, ರೈತರ ಸಾಲ ಮನ್ನಾ ಮಾಡಲು ಹಣ ಎಲ್ಲಿಂದ ತರಲಿ ಸರ್ಕಾರದ ಬಳಿ ನೋಟು ಮುದ್ರಣ ಮಾಡುವ ಯಂತ್ರವಿಲ್ಲ ಎಂದು ಹೇಳಿದ್ದ ಈ ಯಡಿಯೂರಪ್ಪನವರ ಮಾತು ರಾಜ್ಯದ ಜನ ನಂಬಲ್ಲ. ಯಡಿಯೂರಪ್ಪ ಸೇರಿ ಬಿಜೆಪಿಯ ಯಾವ ಮುಖಂಡರು ನಂಬಿಕೆಗೆ ಅರ್ಹರಲ್ಲ ಎಂದರು.
ಅಧಿಕಾರದಲ್ಲಿದ್ದಾಗ ಏನೂ ಮಾಡದೇ ಈಗ ಢೋಂಗಿತನ ತೋರುತ್ತಿದ್ದಾರೆ. 5 ವರ್ಷದಲ್ಲಿ ದಲಿತರ ಏಳಿಗೆಗೆ 21 ಸಾವಿರ ಕೋಟಿ ಖರ್ಚು ಮಾಡಿ ಈಗ ದಲಿತರ ಮನೆಯಲ್ಲಿ ಉಪಹಾರ ಸೇವಿಸುವ ನಾಟಕ ಆಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದ ಸಿದ್ದರಾಮಯ್ಯ ನಮ್ಮ ಸರ್ಕಾರ ದಲಿತರ ಅಭಿವೃದ್ಧಿಗೆ 80 ಸಾವಿರ ಕೋಟಿ ರೂ. ಖರ್ಚು ಮಾಡಿದೆ ಎಂದರು.
ಬಿಜೆಪಿಯಿಂದ ಅಧಿಕಾರ ದುರ್ಬಳಕೆ: ಪ್ರಧಾನಿ ಮೋದಿ, ಅಮಿತ್ಷಾ, ಯಡಿಯೂರಪ್ಪ ಮಾತೆತ್ತಿದ್ದರೆ, ಸಿದ್ದರಾಮಯ್ಯ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಹೇಳುತ್ತಾರೆ. ಆದರೆ, 4 ವರ್ಷ 9 ತಿಂಗಳಲ್ಲಿ ಯಾವುದೇ ಹಗರಣ ಇಲ್ಲದೇ ಭ್ರಷ್ಟಾಚಾರ ಮುಕ್ತ ಸರ್ಕಾರ ನಡೆಸಿದ್ದೇನೆ.
ಕಾಂಗ್ರೆಸ್ ಪಕ್ಷ ಈ ದೇಶವನ್ನು 60 ವರ್ಷ ಆಳಿದೆ. ಆದರೆ, ಯಾವತ್ತೂ ಐಟಿ, ಸಿಬಿಐ, ಇಡಿ ಅನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಆದರೆ, ಜಾರ್ಜ್, ಡಿ.ಕೆ. ಶಿವಕುಮಾರ್, ಎಂಟಿಬಿ ನಾಗರಾಜ್ ಮೇಲೆ ಐಟಿ ದಾಳಿ ನಡೆಸಿ, ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಹೇಳಿದ ಮೋದಿ ಈಗ “ಪಕೋಡ’ ಮಾರಲು ಹೇಳುತ್ತಿದ್ದಾರೆ ಎಂದು ಹರಿಹಾಯ್ದರು.
ಒಂದು ಕುಟುಂಬಕ್ಕೆ 40 ರೂ.: ದೇಶದ 10 ಕೋಟಿ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಆರೋಗ್ಯ ವಿಮೆ ಕೊಡುವುದಾಗಿ ಪ್ರಧಾನಿ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಆದರೆ, ಅದಕ್ಕಾಗಿ ಮೀಸಲಿಟ್ಟ ಹಣ ಬರೀ 2 ಸಾವಿರ ಕೋಟಿ ರೂ. ಮಾತ್ರ. ಈ ಹಣದಲ್ಲಿ ಒಂದು ಕುಟುಂಬಕ್ಕೆ 5 ಲಕ್ಷ ಅಲ್ಲ, ಕೇವಲ 40 ರೂ. ಸಿಗುತ್ತದೆ. ಇದನ್ನು ಜನಪರ ಕಾಳಜಿ ಎಂದು ಹೇಳಬೇಕಾ ಎಂದು ಇದೇ ವೇಳೆ ಸಿದ್ದರಾಮಯ್ಯ ವ್ಯಂಗ್ಯವಾಡಿದರು.