Advertisement

ಸಿದ್ದರಾಮಯ್ಯ ಸಿಎಂ ಆಗಬಾರದಂತೇನಿಲ್ಲ,Urgent ಅಲ್ಲಿ ಆಗಲ್ಲ!: ಡಿಕೆಶಿ

02:04 PM Aug 29, 2018 | Team Udayavani |

ಬೆಂಗಳೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಬಾರದು ಅಂತೇನಿಲ್ಲ. ಅವಸರದಲ್ಲಿ ಆಗುವುದಿಲ್ಲ  ಎಂದು ಸಚಿವ ಡಿ.ಕೆ ಶಿವಕುಮಾರ್‌ ಅವರು ಹೇಳಿಕೆ ನೀಡಿದ್ದಾರೆ. 

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ  ಈಗ ಮೈತ್ರಿ ಸರ್ಕಾರ ಇದೆ. ಅಧಿಕಾರಕ್ಕೆ ಬಂದು 3 ತಿಂಗಳು ಮಾತ್ರ ಆಗಿದೆ. ಇನ್ನು 4 ವರ್ಷ 9 ತಿಂಗಳು ಕುಮಾರಸ್ವಾಮಿ ಅವರು ಅಧಿಕಾರ ನಡೆಸಲಿದ್ದಾರೆ. ಆ ಬಳಿಕ ಯಾರು ಬೇಕಾದರು ಸಿಎಂ ಆಗಬಹುದು ಎಂದರು. 

ಸಿದ್ದರಾಮಯ್ಯ ಹೇಳಿಕೆ ವಿಚಾರ ಭಾರಿ ಚರ್ಚೆಗೆ ಕಾರಣವಾದ ಬಳಿಕ ಅವರು ಸ್ಪಷ್ಟೀಕರಣವನ್ನೂ ನೀಡಿ ನಾನು ಈಗ ಸಿಎಂ ಆಗುತ್ತೇನೆ ಅಂದಿದ್ದಲ್ಲ. ಮುಂದೆ ಜನ ಆಶೀರ್ವಾದ ನೀಡಿದರೆ ಸಿಎಂ ಆಗುತ್ತೇನೆ ಅಂದಿದ್ದು ಎಂದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next