Advertisement
ರಾಜ್ಯದ ಕೆಲವು ಶಾಲೆಗಳಲ್ಲಿ ಮಲಯಾಳ ಬಳಕೆಗೆ ನಿಷೇಧವಿದೆಯಾದರೂ ಹಾಗೆಯೇ ಗಡಿಪ್ರದೇಶಗಳ ಶಾಲೆಗಳಲ್ಲಿ ಮಲಯಾಳ ಕಲಿಕೆಗೆ ಪರ್ಯಾಪ್ತವಾದ ಮೂಲ ಸೌಕರ್ಯ ಇಲ್ಲವೆಂದೂ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಲಯಾಳ ಕಲಿಕೆಯನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ.
ಮಾತೃ ಭಾಷೆಯ ಬಗೆಗಿನ ಸಂವಿಧಾನದತ್ತ ಸಂರಕ್ಷಣೆ ದೊರೆಯದೆ ಅನುದಿನ ತಮ್ಮ ಭಾಷೆ, ಸಂಸ್ಕೃತಿ ಹಾಗು ಜೀವನವಕಾಶವನ್ನು ಕಳೆದುಕೊಳ್ಳುತ್ತಿರುವ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕ ಕನ್ನಡಿಗರಿಗೆ ಆಳುವ ಸರಕಾರದ ಮಲಯಾಳ ಕಡ್ಡಾಯ ತೀರ್ಮಾನ ಅಂತಿಮ ಗದಾಪ್ರಹಾರವಾಗಲಿದೆ. ತುಳು, ಕೊಂಕಣಿ, ಮರಾಠಿ, ಉರ್ದು ಮೊದಲಾದ ಮನೆ ಮಾತುಗಳ ಆಧಾರದಲ್ಲಿ ಹಾಗು ಪಕ್ಷ ಜಾತಿ ಮತಗಳ ಆಧಾರದಲ್ಲಿ ಗಡಿನಾಡಿನ ಕನ್ನಡಿಗರ ಐಕ್ಯವನ್ನು ಒಡೆಯುವಲ್ಲಿ ಬಹುತೇಕ ಯಶಸ್ವಿಯಾಗಿರುವ ಕೇರಳ ಸರಕಾರ ಆಡಳಿತ, ವ್ಯವಹಾರ ಮೊದಲಾದ ಪ್ರತಿಯೊಂದು ರಂಗಗಳಲ್ಲೂ ಮಲಯಾಳವನ್ನು ಕಡ್ಡಾಯಗೊಳಿಸಿ ಕನ್ನಡವನ್ನು ನಿರ್ಲಕ್ಷಿಸುವ ಮೂಲಕ ಮಲಯಾಳವನ್ನು ಕಲಿಯದಿದ್ದರೆ ಉಳಿಗಾಲವಿಲ್ಲವೆಂಬ ಪರಿಸ್ಥಿತಿಯನ್ನು ನಿರ್ಮಿಸಿತು. ಪ್ರಾಮಾಣಿಕ ಕನ್ನಡಪರ ಹೋರಾಟಗಳಿಗೆ ಕೈಜೋಡಿಸಿದ ತಮ್ಮ ಸ್ವಾರ್ಥ ಉದಾಸೀನಗಳಲ್ಲಿ ಮುಳುಗಿ ಹೋದ ಕನ್ನಡಿಗರೂ ಈಗ ಬಲಹೀನರಾಗಿರುವುದನ್ನು ಸರಕಾರ ಅರಿತುಕೊಂಡಿದೆ.
Related Articles
Advertisement