Advertisement

ಸ್ಮಾರಕವಾಗುವಂತೆ ಬದುಕು ಸಾಗಿಸಿ

04:43 PM Sep 03, 2018 | |

ಹಾನಗಲ್ಲ: ದೇಶಕ್ಕೆ ಮಾರಕವಾಗಿ ಬದುಕುವ ಬದಲು ಸ್ಮಾರಕವಾಗುವಂತೆ ಬದುಕುವುದೇ ಜೀವನ. ಅಂತಹ ಜೀವನ ಎಲ್ಲರ ಪ್ರೀತಿಗೆ ಪಾತ್ರವಾಗುತ್ತದೆ ಎಂದು ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಕರೆ ನೀಡಿದರು.

Advertisement

ಹಾನಗಲ್ಲ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಜನಸ್ನೇಹಿ ಸಂಘ ಹುತಾತ್ಮ ಯೋಧರ
ಕುಟುಂಬಕ್ಕೆ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ, ಜಿಲ್ಲೆಯ ಮುಗಳಿ ಗ್ರಾಮದ ಹುತಾತ್ಮ ವೀರಯೋಧ ಚಂದ್ರಶೇಖರ
ಡವಗಿ ಅವರ ಕುಟುಂಬಕ್ಕೆ ಸೈನಿಕ ನಿಧಿ ಅರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸೈನಿಕರನ್ನು ಅವಮಾನಿಸುವವರು ನೂರು ಬಾರಿ ಯೋಚಿಸಬೇಕು. ಸೈನಿಕರನ್ನು ಗೌರಿವಿಸುವ ದೇಶ ಮಾತ್ರ ಸುಭದ್ರವಾಗಿ ನೆಮ್ಮದಿಯಾಗಿ ಇರಬಲ್ಲದು. ದಯೆ ಧರ್ಮಕ್ಕೆ ಹೆಸರಾದ ಭಾರತ, ಸಂತ ಮಹಂತರ ನಾಡು. ಇಂಥ ನಾಡಿನಲ್ಲಿ ಮಾರಕವಾಗಿ ಬದುಕುವ ಬದಲು, ಸ್ಮಾರಕವಾಗುವಂತೆ ಬದುಕುವಂತೆ ಮನವಿ ಮಾಡಿದರು.

ಹೋತನಹಳ್ಳಿಯ ಸದ್ಗುರು ಶಂಕರಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ದೇಶದ ಹಿತಕ್ಕೆ ಮಠ ಮಂದಿರಗಳು ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಬೇಕು. ಧೈರ್ಯ, ತ್ಯಾಗದ ಮೂಲಕ ನಮ್ಮನ್ನು ಕಾಯುತ್ತಿರುವ ಸೈನಿಕರು ನಮಗೆ ಪ್ರೇರಣೆಯಾಗಿದ್ದಾರೆ. ಇಂಥ ದೇಶಕಟ್ಟುವ ಕಾರ್ಯಕ್ಕೆ ಮಠ ಮಂದಿರಗಳು ಬಹುಮುಖ್ಯವಾಗಿ ಪ್ರೇರಣೆಯಾಗಿ ಜಾಗೃತಿ ಮೂಡಿಸಬೇಕು ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಪ್ರೊ| ಮಾರುತಿ ಶಿಡ್ಲಾಪೂರ, ಈ ದೇಶದ ರೈತ ಹಾಗೂ ಸçನಿಕರನ್ನು ಗೌರವಿಸದವರು ಭಾರತೀಯರೇ ಅಲ್ಲ. ಕೃತಜ್ಞತೆಯಿಂದ ಬದುಕುವುದನ್ನು ಕಲಿಸಬೇಕಾಗಿದೆ. ದೇಶದ ಗಡಿಗಳಲ್ಲಿ ತಮ್ಮನ್ನು ಅರ್ಪಿಸಿಕೊಂಡು ಬದುಕುವ ಸೈನಿಕರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು. 

ಅಕ್ಕಿಆಲೂರಿನ ಜಿಡಿಜಿ ಗುರುಕುಲದ ನಾಗರಾಜ ಪಾವಲಿ ಮಾತನಾಡಿ, ಯುವಕರ ದಾರಿ ಈಗ ಆತ್ಮಾವಲೋಕನಕ್ಕೆ ಒಳಗಾಗಬೇಕಾಗಿದೆ. ಸಮಾಜಮುಖಿ ಜೀವನ ನಮ್ಮದಾಗಬೇಕು. ಈಗ ದೇಶಭಕ್ತಿಯ ಕೊರತೆ ಎಲ್ಲೆಡೆ ಕಾಣುತ್ತಿರುವುದು ವಿಷಾದದ ಸಂಗತಿ ಎಂದರು.

ಇದೇ ಸಂದರ್ಭದಲ್ಲಿ ಹುತಾತ್ಮ ವೀರಯೋಧ ಚಂದ್ರಶೇಖರಡವಗಿ ಅವರ ಪತ್ನಿ ಶೀಲಾ ಅವರಿಗೆ ಸ್ವಾಮಿ ವಿವೇಕಾನಂದ ಜನಸ್ನೇಹಿ ಸಂಘ ಸಂಗ್ರಹಿಸಿದ ನಿಧಿಯನ್ನು ಸಮರ್ಪಿಸಲಾಯಿತು. ಕಿರಣ ಹೂಗಾರ, ಅಶೋಕ ಕೊಂಡ್ಲಿ ಉಪನ್ಯಾಸಕರಾಗಿ ಪಾಲ್ಗೊಂಡಿದ್ದರು. ಸ್ವಾಮಿ ವಿವೇಕಾನಂದ ಜನಸ್ನೇಹಿ ಸಂಘದ ಅಧ್ಯಕ್ಷ ಈರಪ್ಪ ದುಂಡಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಮುಗಳಿ ಗ್ರಾಮದ ಹುತಾತ್ಮ ವೀರಯೋಧ ಚಂದ್ರಶೇಖರ ಡವಗಿ ಅವರ ಪತ್ನಿ ಶಿಲ್ಪಾ, ಗ್ರಾಪಂ ಅಧ್ಯಕ್ಷ ಪ್ರಕಾಶ ದುಂಡಣ್ಣನವರ, ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಂದ್ರಶೇಖರ ಶಿಸನಳ್ಳಿ, ಕಾರ್ಯದರ್ಶಿ ಟಿ.ಎಸ್‌.ಪಾಟೀಲ, ಮಾಜಿ ಸೈನಿಕರಾದ ಪಿ.ಎಲ್‌. ರಣದೇವಿ, ಜೆ.ಬಿ.ಪೊಲೀಸಗೌಡರ, ವೀರಭದ್ರಗೌಡ ಪಾಟೀಲ, ಕೃಷ್ಣಪ್ಪ ಕರಭೀಮಣ್ಣನವರ, ರೋಶನಿ ಸಮಾಜಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್‌ ಡಿಂಪಲ್‌ ಡಿಸೋಜಾ, ಪ್ರಾಚಾರ್ಯರಾದ ಎಂ.ಎಂ.ಕಡ್ಡಿಪುಡಿ, ಮಹಮ್ಮದ್‌ಶರೀಫ್‌ ಹಾನಗಲ್ಲ ಅತಿಥಿಗಳಾಗಿದ್ದರು.

Advertisement

ದೇಶಕ್ಕಾಗಿ ಪ್ರಾಣ ನೀಡಿದ ನನ್ನ ಪತಿ ಚಂದ್ರಶೇಖರ ಡವಗಿ ಅವರ ಬಗ್ಗೆ ಈ ದೇಶದ ಜನ ತೋರುತ್ತಿರುವ ಅಭಿಮಾನಕ್ಕೆ ನಾನು ಚಿರಋಣಿ. ಬಾಳಂಬೀಡದ ದೇಶ ಭಕ್ತರು ನನಗೆ ತವರಿನ ಪ್ರೀತಿ ತೋರಿಸಿದ್ದಾರೆ. ದೇಶಕ್ಕಾಗಿ ನನ್ನ ಪತಿ ಪ್ರಾಣಾರ್ಪಣೆ ಮಾಡಿರುವುದು ಹಾಗೂ ದೇಶ ಭಕ್ತರು ನನಗೆ ತೋರುತ್ತಿರುವ ಗೌರವದ ಮುಂದೆ ನಾನು ಜನರ ಅಭಿಮಾನವನ್ನು ಮನಸಾರೆ ಒಪ್ಪಿಕೊಂಡಿದ್ದೇನೆ.
 ಶೀಲಾ ಡವಗಿ,
 ಹುತಾತ್ಮ ಚಂದ್ರಶೇಖರ ಪತ್ನಿ

Advertisement

Udayavani is now on Telegram. Click here to join our channel and stay updated with the latest news.

Next