Advertisement

GSB ಸಭಾ ಮುಂಬಯಿ ಅಧ್ಯಕ್ಷರಾಗಿ ಲಕ್ಷ್ಮೀಕಾಂತ್‌ ಪ್ರಭು ಮರು ಆಯ್ಕೆ

04:04 PM Feb 28, 2019 | Team Udayavani |

ಮುಂಬಯಿ: ನಗರದ ಮಾಟುಂಗದಲ್ಲಿರುವ ಗೌಡ ಸಾರಸ್ವತ ಬ್ರಾಹ್ಮಣ ಸಭಾ ಮುಂಬಯಿ ಇದರ 79 ನೇವಾರ್ಷಿಕ ಮಹಾಸಭೆಯು ಇತ್ತೀಚೆಗೆ ಗೋಪಾಲ್‌ ನಾಯಕ್‌ ಮೆಮೋರಿಯಲ್‌ ಕ್ರೀಡಾ ಮಂದಿರದ ಟಿ. ಎಂ. ಪೈ ಸಭಾಗೃಹದಲ್ಲಿ ನಡೆಯಿತು.

Advertisement

ಸಭಾದ ಅಧ್ಯಕ್ಷ ಲಕ್ಷ್ಮೀಕಾಂತ್‌ ಟಿ. ಪ್ರಭು ಇವರು ಸ್ವಾಗತಿಸಿ, ಸಂಸ್ಥೆಯ ವಾರ್ಷಿಕ ಸಿದ್ಧಿ-ಸಾಧನೆಗಳನ್ನು ವಿವರಿಸಿ ವರದಿ ವಾಚಿಸಿದರು. ಅಲ್ಲದೆ 2017-18ನೇ ಸಾಲಿನಲ್ಲಿ ಸಹಕರಿಸಿದ ಎಲ್ಲಾ ದಾನಿಗಳನ್ನು, ಪ್ರಾಯೋಜಕರನ್ನು 

ಹಾಗೂ ಜಾಹೀರಾತುದಾರರನ್ನು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.
ಜಿಎಸ್‌ಬಿ ಸಭಾದ 83ನೇ ವಾರ್ಷಿಕ ವರದಿ ಸಹಿತ ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಲಾಯಿತು. ಇದೇ ಸಂದರ್ಭದಲ್ಲಿ 2018-19ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಲಕ್ಷ್ಮೀಕಾಂತ್‌ ಟಿ. ಪ್ರಭು ಇವರನ್ನು ಅವಿರೋಧವಾಗಿ ಪುನರಾಯ್ಕೆಗೊಳಿಸಲಾಯಿತು.

ಉಪಾಧ್ಯಕ್ಷರಾಗಿ ಶಾಂತೇರಿ ಎನ್‌. ನಾಯಕ್‌, ಸುಬ್ರಾಯ ಡಿ. ಶೆಣೈ, ಭರತ್‌ ಎಸ್‌. ಕಿಣಿ, ಜತೆ ಕಾರ್ಯದರ್ಶಿಗಳಾಗಿ ಅಮಿತಾ ಎ. ಕಿಣಿ, ಬೀನಾ ಎನ್‌. ಶೆಣೈ, ಸತೀಶ್‌ ವಿ. ಮನೇಲ್‌, ಮೋಹಿನಿ ಎಂ. ಹೆಗ್ಡೆ, ಉದಯ ವಿ. ಮಲ್ಯ, ಪ್ರತಿಮಾ ಪಿ. ಪೈ, ಕೆ. ಆರ್‌. ಭಕ್ತ ಅವರನ್ನು ನೇಮಿಸಲಾಯಿತು.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುಭಾಶ್ಚಂದ್ರ ಆರ್‌. ರಾವ್‌, ತನುಶ್ರೀ ಎ. ಶೆಣೈ, ದಿನೇಶ್‌ ಎಂ. ಭಂಡಾರ್ಕರ್‌, ಶಿಲ್ಪಾ ಕಾಮತ್‌, ದಾಮೋದರ ಮಲ್ಯ, ಭಾರತಿ ವಿ. ಭಂಡಾರ್ಕರ್‌, ಪ್ರಕಾಶ್‌ ಎಂ. ಪೈ, ಪಾಂಡುರಂಗ ವಿ. ನಾಯಕ್‌ ಇವರನ್ನು ಆಯ್ಕೆಮಾಡಲಾಯಿತು. ಗೌರವ ಜತೆ ಕಾರ್ಯದರ್ಶಿ ಸತೀಶ್‌ ವಿ. ಮನೇಲ್‌ ಅವರು ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next