Advertisement

ಅಮೃತ ಗ್ರಾಮ ಪಂಚಾಯತ್‌ ಯೋಜನೆಗೆ ಚಾಲನೆ:ಮಂಗಳೂರು,ಮೂಡುಬಿದಿರೆ ತಾ|:ಏಳು ಗ್ರಾ.ಪಂಗಳಲ್ಲಿ ಜಾರಿ

08:18 PM Sep 23, 2021 | Team Udayavani |

ಮಹಾನಗರ: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನೆಪಿಗಾಗಿ ಮುಖ್ಯಮಂತ್ರಿಯವರು ಘೋಷಿಸಿರುವ ಅಮೃತ ಗ್ರಾಮ ಪಂಚಾಯತ್‌ ಯೋಜನೆಗೆ ಚಾಲನೆ ದೊರಕಿದ್ದು, ಮಂಗಳೂರು ತಾಲೂಕಿನಲ್ಲಿ ಆಯ್ಕೆಯಾ ಗಿರುವ ಐದು ಗ್ರಾ.ಪಂ., ಮೂಡುಬಿದಿರೆಯ 2 ಗ್ರಾ.ಪಂ.ಗಳಲ್ಲಿ ಇದು ಆನುಷ್ಠಾನಗೊಳ್ಳುತ್ತಿದೆ.

Advertisement

ಮೂಡುಬಿದಿರೆ ತಾಲೂಕಿನ ಬೆಳುವಾಯಿ, ತೆಂಕಮಿಜಾರು, ಮಂಗಳೂರು ತಾಲೂಕಿನ ಬಡಗ ಎಡಪದವು, ಗಂಜೀಮಠ, ಮುನ್ನೂರು, ಹಳೆಯಂಗಡಿ, ಪೆರ್ಮುದೆ ಗ್ರಾ.ಪಂ.ಗಳನ್ನು ಅಮೃತ ಗ್ರಾ.ಪಂ. ಯೋಜನೆಗೆ ಆಯ್ಕೆ ಮಾಡಲಾಗಿದೆ. ಜಿಲ್ಲೆಯ ಒಟ್ಟು 223 ಗ್ರಾ.ಪಂ.ಗಳಲ್ಲಿ 27 ಗ್ರಾ.ಪಂ.ಗಳು ಆಯ್ಕೆಗೊಂಡಿವೆ.

ಅಮೃತ ಗಾ.ಪಂ. ಯೋಜನೆ:

ದೇಶದ 75ನೇ ಸ್ವಾತಂತ್ರ್ಯೋತ್ಸವದ ಸವಿನೆನೆಪಿಗಾಗಿ ಆ. 15ರಂದು ಧ್ವಜಾರೋಹಣ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ 750 ಗ್ರಾ.ಪಂ.ಗಳಲ್ಲಿ ಸಮಗ್ರ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಅಮೃತ ಗ್ರಾ.ಪಂ. ಯೋಜನೆಯನ್ನು ಘೋಷಿಸಿದ್ದು, ಸೆ. 23ರಂದು ಬೆಂಗಳೂರಿನಲ್ಲಿ ಯೋಜನೆಗೆ ಚಾಲನೆ ನೀಡಿದ್ದಾರೆ.

ಯೋಜನೆಯಲ್ಲಿ ಏನಿದೆ ? :

Advertisement

ಬೀದಿ-ದೀಪಗಳ ಅಳವಡಿಕೆ, ಪ್ರತಿ ಮನೆಗೆ ಕುಡಿಯುವ ನೀರಿನ ನಳ್ಳಿ ಸಂಪರ್ಕ, ಶೇ. 100ರಷ್ಟು ಘನತ್ಯಾಜ್ಯ ವಿಂಗಡಣೆ, ವಿಲೇವಾರಿ, ತ್ಯಾಜ್ಯ ನೀರು ವೈಜ್ಞಾನಿಕವಾಗಿ ನಿರ್ವಹಿಸುವುದು, ಗ್ರಾ.ಪಂ. ಕಟ್ಟಡಗಳಿಗೆ ಸೌರ ವಿದ್ಯುತ್‌ ಅಳವಡಿಕೆ, ಅಮೃತ ಉದ್ಯಾನವನಗಳ ನಿರ್ಮಾಣ, ಗ್ರಾ.ಪಂ. ಗ್ರಂಥಾಲಯಗಳ ಡಿಜಿಟಲೀಕರಣ, ಶಾಲೆಗಳು, ಅಂಗನವಾಡಿಗಳಿಗೆ ಕುಡಿಯುವ ನೀರು, ಶೌಚಾಲಯ, ಶಾಲೆಗಳಲ್ಲಿ ಆಟದ ಮೈದಾನ, ಆವರಣ ಗೋಡೆ ನಿರ್ಮಾಣ, ಕೆರೆ, ಕಲ್ಯಾಣಿಗಳ ಪುನಶ್ಚೇತನ ಕಾರ್ಯಕ್ರಮಗಳು ಅಮೃತ ಗ್ರಾ.ಪಂ. ಯೋಜನೆಯಲ್ಲಿ ಒಳಗೊಂಡಿದೆ. ಜಲಜೀವನ್‌ ಮಿಷನ್‌, ಸ್ವತ್ಛ ಭಾರತ್‌ ಮಿಷನ್‌, ನರೇಗಾ, ಗ್ರಾ.ಪಂ. ಸ್ವಂತ ಅನುದಾನ, 15ನೇ ಹಣಕಾಸು, ಯೋಜನೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಶಾಲಾ ಕಟ್ಟಡದ ಅನುದಾನಗಳನ್ನು ಬಳಸಿಕೊಂಡು ಅನುಷ್ಠಾನಗೊಳಿಸಲಾಗುತ್ತದೆ.

ಅನುಷ್ಟಾನ:

ಅಮೃತ ಗ್ರಾ.ಪಂ.ಯೋಜನೆಯಲ್ಲಿ ಆಯ್ಕೆಗೊಂಡ ಗ್ರಾ.ಪ.ಗಳು ಕಾರ್ಯಕ್ರಮಗಳ ಪಟ್ಟಿ ತಯಾರಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಗ್ರಾಮಸಭೆಯಲ್ಲಿ ಅನುಮೋದನೆ ಪಡೆಯಲಾಗುತ್ತದೆ. ಕ್ರಿಯಾ ಯೋಜನೆಯನ್ನು ತಾಲೂಕು ಪಂಚಾಯತ್‌ ಪರಿಶೀಲನೆ ನಡೆಸಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಸಲ್ಲಿಸುತ್ತದೆ. ಜಿಲ್ಲಾ ಪಂಚಾಯತ್‌ ಕ್ರಿಯಾ ಯೋಜನೆಗೆ ಅನುಮೋದನೆ ನೀಡುತ್ತದೆ ಮತ್ತು ಯೋಜನೆ ಪ್ರಗತಿಯನ್ನು ಪರಿಶೀಲಿಸುತ್ತದೆ. ಕಾಮಗಾರಿಗಳ ಅನುಷ್ಠಾನದ ಸಂಪೂರ್ಣ ಜವಾಬ್ದಾರಿ ತಾಲೂಕು ಪಂಚಾಯತ್‌ನದ್ದಾಗಿದೆ. ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಗ್ರಾ.ಪಂ.ಗೆ 25 ಲಕ್ಷ ರೂ. ಸರಕಾರದಿಂದ ನೀಡಲಾಗುತ್ತದೆ.

ಬಂಟ್ವಾಳ ತಾಲೂಕಿನ ಸಂಗಬೆಟ್ಟು, ಇರ್ವತ್ತೂರು, ಪಿಲಾತಬೆಟ್ಟು, ಕಡೇಶ್ವಾಲ್ಯ, ಬಾಳೆಪುಣಿ, ಇಡಿRದು, ಬೆಳ್ತಂಗಡಿಯ ಮಡಂತ್ಯಾರು, ಕೊಕ್ಕಡ, ಧರ್ಮಸ್ಥಳ, ಉಜಿರೆ, ಹೊಸಂಗಡಿ, ಅಳದಂಗಡಿ, ಕಡಬದ ಸವಣೂರು, ಅಲಂಕಾರು, ಪುತ್ತೂರಿನ ಉಪ್ಪಿನಂಗಡಿ, ಆರ್ಯಾಪು, ಕಬಕ, ಸುಳ್ಯದ ಅರಂತೋಡು, ಮಂಡೆಕೋಲು, ಮರ್ಕಂಜ ಗ್ರಾಂ.ಪಂ.ಗಳು ಜಿಲ್ಲೆಯಲ್ಲಿ ಆಯ್ಕೆಗೊಂಡಿರುವ ಇತರ ಗ್ರಾ.ಪಂ.ಗಳು.

ಅಮೃತ ಗ್ರಾಮೀಣ  ವಸತಿ ಯೋಜನೆ:

ಅಮೃತ ಗ್ರಾ.ಪಂ. ಯೋಜನೆಯಲ್ಲಿ ಆಯ್ಕೆಯಾಗಿರುವ ಗ್ರಾ.ಪಂ.ಗಳಲ್ಲಿ ವಸತಿ ರಹಿತ ರಿಗೆ, ನಿವೇಶನ ರಹಿತರಿಗೆ ವಸತಿ, ನಿವೇಶನಗಳನ್ನು ನೀಡುವ ಅಮೃತ ಗ್ರಾಮೀಣ ವಸತಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಮಂಗಳೂರು ತಾಲೂಕಿ ನಲ್ಲಿ ಬಡಗ ಎಡಪದವಿನಲ್ಲಿ 181, ಗಂಜಿಮಠದಲ್ಲಿ 228, ಮುನ್ನೂರಿನಲ್ಲಿ 388, ಹಳೆಯಂಗಡಿಯಲ್ಲಿ 269, ಪೆರ್ಮುದೆಯಲ್ಲಿ 392 ನಿವೇಶನ ರಹಿತರನ್ನು ಗುರುತಿಸಲಾಗಿದೆ. ಮೂಡುಬಿದಿರೆ ತಾಲೂಕಿನಲ್ಲಿ ಬೆಳುವಾಯಿಯಲ್ಲಿ 148, ತೆಂಕ ಮಿಜಾರಿನಲ್ಲಿ 159 ನಿವೇಶನ ರಹಿತರನ್ನು ಗುರುತಿಸಲಾಗಿದೆ. ಮುನ್ನೂರಿನಲ್ಲಿ 5, ಹಳೆಯಂಗಡಿಯಲ್ಲಿ 16, ಬೆಳುವಾಯಿಯಲ್ಲಿ 45 ಹಾಗೂ ತೆಂಕಮಿಜಾರಿನಲ್ಲಿ 2 ವಸತಿ ರಹಿತರು ಇದ್ದು ಇನ್ನುಳಿದ ಗ್ರಾ,ಪಂ.ಗಳಲ್ಲಿ ವಸತಿ ರಹಿತರಿಲ್ಲ. ಇವರೆಲ್ಲರಿಗೂ ನಿವೇಶನ, ಮನೆಗಳನ್ನು ನೀಡುವ ಗುರಿಯನ್ನು ಇರಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next