Advertisement

ವಿಶ್ವವಿಜೇತರ ಬಹುಮಾನಕ್ಕೆ ಲತಾ ಸಂಗೀತ ಸುಧೆ!

12:20 AM May 19, 2019 | Team Udayavani |

ಭಾರತ ವಿಶ್ವಕಪ್‌ ಜಯಿಸಿದ್ದರಿಂದ ನಿಜವಾದ ಸಂಕಟ ಎದುರಾದದ್ದು ಯಾರಿಗೆ ಗೊತ್ತೇ? ಬಿಸಿಸಿಐಗೆ! ಕಾರಣ, ವಿಶ್ವವಿಜೇತ ಕಪಿಲ್‌ ಪಡೆಗೆ ಬಹುಮಾನ ನೀಡಲು ಮಂಡಳಿಯಲ್ಲಿ ದುಡ್ಡೇ ಇರಲಿಲ್ಲ! ಇದು ಮಂಡಳಿಯ ಮರ್ಯಾದೆಯ ಪ್ರಶ್ನೆ. ಏನು ಮಾಡುವುದೆಂದು ಮಂಡಳಿ ಅಧ್ಯಕ್ಷ ಎನ್‌.ಕೆ.ಪಿ. ಸಾಳ್ವೆ ತಲೆ ಕೆಡಿಸಿಕೊಂಡರು. ಆಗ ನೆನಪಾದವರೇ “ಭಾರತದ ಕೋಗಿಲೆ’ ಲತಾ ಮಂಗೇಶ್ಕರ್‌!

Advertisement

ಒಂದು ಸಂಗೀತ ಕಾರ್ಯಕ್ರಮ ಏರ್ಪಡಿಸಿ ಇದರಿಂದ ಒಟ್ಟುಗೂಡಿದ ಹಣವನ್ನು ಕ್ರಿಕೆಟಿಗರಿಗೆ ನೀಡೋಣ ಎಂದು ಲತಾ ಅವರಲ್ಲಿ ಸಾಳ್ವೆ ವಿನಂತಿಸಿಕೊಂಡರು. ಕ್ರಿಕೆಟ್‌ ಅಭಿಮಾನಿಯೂ ಲತಾ ಇದಕ್ಕೆ ಸಮ್ಮತಿಸಿದರು. ಹೊಸದಿಲ್ಲಿಯಲ್ಲಿ ಲತಾ ಮಂಗೇಶ್ಕರ್‌ ಸಂಗೀತ ಸಂಜೆ ಅದ್ದೂರಿಯಾಗಿಯೇ ನಡೆಯಿತು. ಇದರಿಂದ 20 ಲಕ್ಷ ರೂ. ಒಟ್ಟುಗೂಡಿತು. ಭಾರತೀಯ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಒಂದೊಂದು ಲಕ್ಷ ರೂ. ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next