Advertisement

ಅರ್ಜಿ ಇತ್ಯರ್ಥಕ್ಕೆ ಕೊನೆಯ ಅವಕಾಶ

06:25 AM Aug 07, 2018 | Team Udayavani |

ಬೆಂಗಳೂರು: ತಮ್ಮ ವಿರುದ್ಧ ಬೆಂಗಳೂರು ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಸಲ್ಲಿಸಿರುವ ದಾವೆ ರದ್ದುಪಡಿಸುವಂತೆ
ಕೋರಿ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿರುವ ರಿಟ್‌ ಅರ್ಜಿ ಇತ್ಯರ್ಥಕ್ಕೆ ಹೈಕೋರ್ಟ್‌ ಕೊನೆಯ ಅವಕಾಶ ನಿಗದಿಪಡಿಸಿದೆ. 

Advertisement

ಈ ಕುರಿತು 2014ರಲ್ಲಿ ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾ.ಜಿ.ಎಸ್‌ ಪಂಡಿತ್ ಅವರಿದ್ದ ಏಕಸದಸ್ಯ ಪೀಠ ಸೋಮವಾರ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.ಆದರೆ, ಅರ್ಜಿದಾರರ ಪರ ವಕೀಲರು ಗೈರು ಹಾಜರಿದ್ದ ಕಾರಣ ನ್ಯಾಯಪೀಠ, ಅರ್ಜಿಯನ್ನು ಇನ್ನೊಂದು ಬಾರಿ ಮಾತ್ರ ವಿಚಾರಣೆ ನಡೆಸಿ ಇತ್ಯರ್ಥಪಡಿಸಲಾಗುವುದು ಎಂದುಪ್ರತಿವಾದಿಗಳಿಗೆ ಸೂಚಿಸಿ, ಒಂದು ವಾರ ವಿಚಾರಣೆ ಮುಂದೂಡಿತು. 

ಶಿವಮೂರ್ತಿ ಮುರುಘಾ ಶರಣರು 1991ರಲ್ಲಿ ಪಡೆದ ಮಠದ ಉತ್ತರಾಧಿ ಕಾರಿ ನಿಯಮಗಳನ್ನು ಉಲ್ಲಂ ಸಿದ್ದಾರೆ. ತಮ್ಮ ಹೆಸರಿನ ಜತೆಗೆ ಶರಣರು ಎಂಬ ಪದ ಸೇರಿಸಿಕೊಂಡು ಮಠದ ಪರಂಪರೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಮಠದ ಸ್ಥಿರಾಸ್ತಿ ಹಾಗೂ ಚರಾಸ್ತಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದು ಲಕ್ಷಾಂತರ ಭಕ್ತರ ನಂಬಿಕೆ ದ್ರೋಹ ಎಸಗಿದ್ದಾರೆ. ಹೀಗಾಗಿ ಅವರು ಮಠದ ಪೀಠಾಧಿಪತಿ ಸ್ಥಾನದಲ್ಲಿ ಮುಂದುವರಿ ಯಲು ಅನರ್ಹರು ಎಂದು ಘೋಷಿಸಬೇಕೆಂದು ಕೋರಿ 2007ರಲ್ಲಿ ವಕೀಲರಾದ ಮಲ್ಲಿಕಾರ್ಜುನ ಹಿರೇಮಠ ಹಾಗೂ ರುದ್ರೇಶ್‌ ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ಲ್ಲಿ ದಾವೆ ಹೂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next