Advertisement

ವಿದ್ಯುತ್ ಶಾಕ್ ಹೊಡೆದು ಬಿದ್ದ ಸಿಂಗಳೀಕಗೆ ಸ್ಥಳಿಯರಿಂದ ಸಾಂತ್ವನ

12:30 PM Aug 26, 2019 | keerthan |

ಕಾಪು : ಬಂಟಕಲ್ಲಿನಲ್ಲಿ ವಿದ್ಯುತ್ ಶಾಕ್ ಹೊಡೆದು ನೆಲಕ್ಕೆ ಬಿದ್ದ ಸಿಂಗಳೀಕ (ಮುಜ್ಜು) ವಿಗೆ ಸ್ಥಳಿಯರು ಸಾಂತ್ವನ ನೀಡಿದ ಘಟನೆ ರವಿವಾರ ರಾತ್ರಿ ನಡೆದಿದೆ.

Advertisement

ವಿದ್ಯುತ್ ಶಾಕ್ ಹೊಡೆದು ರಸ್ತೆ ಬದಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಸಿಂಗಳೀಕಕ್ಕೆ ಸ್ಥಳೀಯರ ಮನವಿಯಂತೆ ಕಾಪುವಿನ ಪ್ರಶಾಂತ್ ಪೂಜಾರಿ ಅವರ ನೇತೃತ್ವದಲ್ಲಿ ಆರೈಕೆ ನೀಡಲಾಯಿತು.

ಮಾಹಿತಿ ದೊರಕಿದ ಬಳಿಕ ಶಿರ್ವ ಅರಣ್ಯ ಇಲಾಖೆಯ ಸಿಬಂದಿಗಳು ಸ್ಥಳಕ್ಕೆ ಆಗಮಿಸಿ, ಬಳಿಕ ರಕ್ಷಣೆಯ ದೃಷ್ಟಿಯೊಂದಿಗೆ ತಮ್ಮೊಂದಿಗೆ ಕೊಂಡೊಯ್ದಿದ್ದಾರೆ ಎಂದು ಹೇಳಲಾಗಿದೆ.

ಮನೋಹರ್ ಕಲ್ಲುಗುಡ್ಡೆ, ದಯಾನಂದ ಪೂಜಾರಿ, ಯಶವಂತ್ ರಾವ್, ಮುದ್ದು ಕುಲಾಲ್, ಸುರೇಂದ್ರ ಶೆಟ್ಟಿ, ರಮೇಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next