Advertisement

Landslides: ಹಲವೆಡೆ ಭೂ ಕುಸಿತ: ರಸ್ತೆ ಸಂಚಾರ ಸ್ಥಗಿತ

03:33 PM Jul 19, 2024 | Team Udayavani |

ಶಿರಸಿ: ರಾಗಿಹೊಸಳ್ಳಿ ಗುಡ್ಡ‌ಕುಸಿದು ರಾಷ್ಟ್ರಿಯ ಹೆದ್ದಾರಿ 766ಇ ಶಿರಸಿ‌ ಕುಮಟಾ ಸಂಪರ್ಕ ಕಡಿತವಾಗಿದ್ದು, ಜು.19ರ ಶುಕ್ರವಾರ ಕೂಡ ಮತ್ತೆ ಧರೆ ಕುಸಿದಿದೆ.

Advertisement

ಈ ಗುಡ್ಡ ಮಾತ್ರವಲ್ಲದೆ ಇಲ್ಲಿಯ ಮೊಸಳೆಗುಂಡಿ, ಚಿಕ್ಕಡಿ ಹಾಗೂ ಬಂಡಲದವರೆಗಿನ ಸ್ಥಿತಿ ಹಾಗೇ ಇದೆ. ರಸ್ತೆಪಕ್ಕದ ಧರೆ‌ ಕುಸಿದು ರಸ್ತೆಗೆ ಬೀಳುತ್ತಿದೆ. ಮರಗಳೂ ರಸ್ತೆ ‌ಮೇಲೆ‌ ಬೀಳುತ್ತಿವೆ. ಸಮೀಪದ ಊರುಗಳಿಗೆ ತೆರಳುವವರೂ ಆತಂಕದಲ್ಲೇ ತೆರಳುವಂತಾಗಿದೆ.

ಯಾವ ಕ್ಷಣದಲ್ಲಿ ಎಲ್ಲಿ ಮರ ಬೀಳತ್ತೆ, ಭೂ ಕುಸಿತ ಆಗುತ್ತೆ ಎಂದು ಗೊತ್ತಾಗದ ಸ್ಥಿತಿ ಉಂಟಾಗಿದೆ.

ರಾಗಿಹೊಸಳ್ಳಿ ಬಳಿ ಜು.15ರ ಸೋಮವಾರ ರಾತ್ರಿ ಕುಸಿದ ಗುಡ್ಡದಿಂದ ಈವರೆಗೂ ಕುಮಟಾ‌ ಶಿರಸಿ ಸಂಪರ್ಕ ಸಂಪೂರ್ಣ ಕಡಿದು ಹೋಗಿದೆ.

Advertisement

ಕುಮಟಾ: ಕುಮಟಾ- ಸಿದ್ದಾಪುರ ರಸ್ಥೆಯ ಸಂತೆಗುಳುಯ ಉಳ್ಳೂರುಮಠ ಕ್ರಾಸ್ ನಲ್ಲಿ ಒಂದು ಎಕರೆ ಪ್ರದೇಶಕ್ಕೂ ಮೀರಿದ ಭೂ ಕೂಸಿತ ಉಂಟಾಗಿ ರಸ್ತೆ ಸಂಚಾರ ಸ್ಥಗಿತಗೊಡಿದೆ.

ಸ್ಥಳೀಯಲ್ಲಿ ಆತಂಕ ಹೆಚ್ಚಾಗಿದ್ದು, ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವರು ಭೇಟಿ ನೀಡಿದ್ದಾರೆ.

ಹೊನ್ನಾವರ: ಶರಾವತಿಯ ನದಿಯ ಮಾಗೋಡ ಗ್ರಾಮದ ಬೀರನಗೋಡ ಬಳಿ ಜನ ಹಾಗೂ ಶಾಲಾ ಮಕ್ಕಳು ಓಡಾಡುವ ರಸ್ತೆಯಲ್ಲಿ ಜು.19ರ ಶುಕ್ರವಾರ ಭಾರೀ ಭೂಕುಸಿತ ಉಂಟಾಗಿದೆ. ಶಾಲೆ ರಜೆಯಾಗಿದ್ದರಿಂದ ಹಾಗೂ ಮಧ್ಯಾಹ್ನ ಸಮಯವಾದ್ದರಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next