Advertisement

ಹಳಿ ಮೇಲೆ ಕುಸಿದ ಗುಡ್ಡ; ರೈಲು ಸಂಚಾರ ಸ್ಥಗಿತ

09:46 AM Aug 10, 2019 | keerthan |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಇಂದು ಕೂಡ ಮುಂದುವರಿದಿದ್ದು, ಕಣಿವೆಹಳ್ಳಿ ಬಳಿ ರೈಲು ಹಳಿ ಮೇಲೆ ಗುಡ್ಡ ಕುಸಿದು, ರೈಲು ಸಂಚಾರ ಸ್ಥಗಿತವಾಗಿದೆ.

Advertisement

ಕಣಿವೆಹಳ್ಳಿ ಬಳಿ ಗುಡ್ಡ ಕುಸಿದು, ಭಾರಿ ಪ್ರಮಾಣದ ಕಲ್ಲುಗಳು ಹಳಿಯ ಮೇಲೆ ಬಿದ್ದಿವೆ. ಇದರಿಂದಾಗಿ ಚಿಕ್ಕಮಗಳೂರಿನಿಂದ ಶಿವಮೊಗ್ಗ ರೈಲು ಹಾಗೂ ಚಿಕ್ಕಮಗಗಳೂರಿನಿಂದ- ಯಶವಂತಪುರ ರೈಲು ಸಂಚಾರ ಸ್ಥಗಿತವಾಗಿದೆ. ಬೆಳಿಗ್ಗೆಯಿಂದಲೇ ಸಂಚಾರ ನಿರ್ಬಂಧ ಮಾಡಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ‌ ನೀಡಿ ಪರಿಶೀಲನೆ ನಡೆಸಿದರು.

ನಾಲ್ಕು ದಿನದಿಂದ ಮುಳುಗಡೆಯಾಗಿದೆ ಹೆಬ್ಬಾಳೆ
ಜಿಲ್ಲೆಯ ಹೊರನಾಡು ಕಳಸ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ರಸ್ತೆ ಕಳೆದ ನಾಲ್ಕು ದಿನಗಳಿಂದ ಮುಳುಗಡೆಯಾಗಿದೆ. ಇದು ಇತಿಹಾಸದಲ್ಲಿ ಇದೇ ಮೊದಲು ಹೆಬ್ಬಾಳೆ ಸೇತುವೆ ಇಷ್ಟು ದಿನಗಳ ಕಾಲ ಮುಳುಗಡೆಯಾಗಿದೆ.
ಭದ್ರಾ ನದಿ ತನ್ನ ಸುತ್ತಲೂ 2 ಕಿಮೀ ಜಾಗವನ್ನು ಆಕ್ರಮಿಸಿಕೊಂಡು ಹರಿಯುತ್ತಿದೆ. ಇದರಿಂದಾಗಿ ಹೊರನಾಡು ಕಳಸ ಸಂಪರ್ಕ ಸಂಪೂರ್ಣ ಬಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next