Advertisement

ದೂಧ್ ಸಾಗರ ಜಲಪಾತ ಬಳಿ ಭಾರೀ ಗುಡ್ಡ ಕುಸಿತ: ಗೋವಾಕ್ಕೆ ತೆರಳುವ ರೈಲುಗಳು ತಾತ್ಕಾಲಿಕ ರದ್ದು

09:48 AM Jul 26, 2023 | Team Udayavani |

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿ ಸೇರಿದಂತೆ ವಿವಿಧ ಕಡೆಗೆ ಸುರಿಯುತ್ತಿರುವ ಧಾರಾಕಾರ ಮಳೆಗೆ ದೂಧಸಾಗರ ಜಲಪಾತದ ಬಳಿಯ ಸುರಂಗ ಮಾರ್ಗದಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತಗೊಂಡಿದ್ದು ಗೋವಾಕ್ಕೆ ತೆರಳುವ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

Advertisement

ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಭೂಕುಸಿತವಾಗುತ್ತಿದ್ದು, ಬೆಳಗಾವಿ- ಗೋವಾ ಮಾರ್ಗದಲ್ಲಿರುವ ಕ್ಯಾಸಲ್ ರಾಕ್ ಬಳಿ ಮಂಗಳವಾರ ರಾತ್ರಿ ಗುಡ್ಡ ಕುಸಿತವಾಗಿದೆ. ರೈಲು ಹಳಿಗಳ ಮೇಲೆ ಬಾರಿ ಪ್ರಮಾಣದಲ್ಲಿ ಮಣ್ಣು ಬಿದ್ದಿರುವುದರಿಂದ ಸಂಪರ್ಕ ಕಡಿತಗೊಂಡಿದೆ.

ದೂಧಸಾಗರ್ ಜಲಪಾತ ಬಳಿಯ ಮೂರನೇ ಸುರಂಗದಲ್ಲಿಯೇ ಈ ಗುಡ್ಡ ಕುಸಿತವಾಗಿದೆ. ರೈಲು ಹಳಿಯ ಮೇಲೆ ಮಣ್ಣು ಬಿದ್ದಿದೆ. ಇದರಿಂದ ಮಂಗಳವಾರ ರಾತ್ರಿ ಗೋವಾದಿಂದ ಬೆಳಗಾವಿ ಮೂಲಕ ದೆಹಲಿಗೆ ತೆರಳುತ್ತಿದ್ದ ನಿಜಾಮುದ್ದಿನ್ ಎಕ್ಸಪ್ರೆಸ್ ರೈಲು ಮರ್ಗ ಬದಲಾಯಿಸಿ ಮುಂಬೈ ಮೂಲಕ ಕಳುಹಿಸಲಾಯಿತು.

ದೆಹಲಿಯಿಂದ ಮಿರಜ್ ಮೂಲಕ ರವಿವಾರ ರಾತ್ರಿ ಗೋವಾಕ್ಕೆ ತೆರಳುತ್ತಿದ್ದ ರೈಲು ಬೆಳಗಾವಿವರೆಗೆ ಮಾತ್ರ ಬಂದಿದ್ದು, ಅಲ್ಲಿಂದ‌ ಪ್ರಯಾಣಿಕರನ್ನು ಬುಧವಾರ ಬೆಳಗಿನ‌ ಜಾವ 16 ಬಸ್ ಗಳಲ್ಲಿ ಗೋವಾಕ್ಕೆ ಕಳುಹಿಸಲಾಯಿತು. ಸದ್ಯಕ್ಕೆ ಕ್ಯಾಸಲ್ ರಾಕ್ ವರೆಗೆ ಮಾತ್ರ ರೈಲುಗಳು ತೆರಳುತ್ತಿವೆ.

ಇದನ್ನೂ ಓದಿ: ಕದ್ದ ಜೆಸಿಬಿಯಲ್ಲೇ ಎಟಿಎಂ ಯಂತ್ರ ಕದಿಯಲು ಯತ್ನಿಸಿದ ಖದೀಮ… ಪೊಲೀಸರನ್ನು ಕಂಡು ಪರಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next