Advertisement

ಎಡ ರಂಗದ ಸರಕಾರದಿಂದ ಸಮರ್ಪಕ ಭೂ ಸುಧಾರಣೆ ಜಾರಿ : ಅಮರ್ತ್ಯ ಸೇನ್‌

12:00 PM Jul 07, 2019 | Team Udayavani |

ಕೋಲ್ಕತ : ‘ಪಶ್ಚಿಮ ಬಂಗಾಲದಲ್ಲಿ ಈ ಹಿಂದಿದ್ದ ಎಡ ರಂಗದ ಸರಕಾರ ಭೂ ಸುಧಾರಣೆಗಳನ್ನು ಅತ್ಯಂತ ಸಮರ್ಪಕವಾಗಿ ಜಾರಿ ಮಾಡಿತು; ಆದರೆ ಕೈಗಾರಿಕೆಗಳನ್ನು ನಾಶ ಮಾಡಿದ್ದೇ ಅದಕ್ಕೆ ಮುಳುವಾಯಿತು’ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ಹೇಳಿದ್ದಾರೆ.

Advertisement

ಇಲ್ಲಿನ ಜಾಧವಪುರ ಯುನಿವರ್ಸಿಟಿಯಲ್ಲಿ ನಿನ್ನೆ ಶುಕ್ರವಾರ ಸಂಜೆ ಅವರು ಸಾರ್ವಜನಿಕ ಭಾಷಣ ಮಾಡುತ್ತಿದ್ದರು.

‘ಸಂಯುಕ್ತ ಬಂಗಾಲೀ ಅಸ್ಮಿತೆಯನ್ನು ಬಿಂಬಿಸುವಲ್ಲಿ ಪಶ್ಚಿಮ ಬಂಗಾಲ, ಬಾಂಗ್ಲಾದೇಶದ ಬೆನ್ನಿಗೆ ಬಿದ್ದಿದೆ’ ಎಂದು ಸೇನ್‌ ಹೇಳಿದರು.

‘ಪಶ್ಚಿಮ ಬಂಗಾಲ ಯಾಕೆ ಮತ್ತು ಹೇಗೆ ಸಂಯುಕ್ತ ಬಂಗಾಲೀ ಅಸ್ಮಿತೆಯನ್ನು ಬಿಂಬಿಸುವಲ್ಲಿ ಬಾಂಗ್ಲಾದೇಶದ ಹಿಂದೆ ಬಿದ್ದಿದೆ ಎಂಬುದರ ಬಗ್ಗೆ ಚರ್ಚೆ ನಡೆಯಬೇಕಾಗಿದೆ’ ಎಂದು 1998 ನೊಬೆಲ್‌ ಅರ್ಥಶಾಸ್ತ್ರ ಪುರಸ್ಕೃತರಾಗಿರುವ 85ರ ಹರೆಯದ ಅಮರ್ತ್ಯ ಸೇನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next