Advertisement

ನಿಧಿಯಾಸೆಗಾಗಿ ಅಗೆದರು ಭೂಮಿ

01:53 PM Jan 24, 2021 | Team Udayavani |

ಮುಳಗುಂದ: ಪಟ್ಟಣದಿಂದ ಲಕ್ಷ್ಮೀಶ್ವರ ಮಾರ್ಗದ ರಾಜ್ಯ ಹೆದ್ದಾರಿ ಪಕ್ಕದಲ್ಲಿನ ಜಮೀನೊಂದರಲ್ಲಿ ನಿಧಿಯಾಸೆಗಾಗಿ ಜೆಸಿಬಿ ಮೂಲಕ ಮಣ್ಣು ಅಗೆದು ಶೋಧ ಮಾಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

Advertisement

ಪಟ್ಟಣದ ಶಿದ್ರಾಮಪ್ಪ ಹುಣಸಿಮರದ ಎಂಬುವವರ ಜಮೀನಿನಲ್ಲಿನ ಕೆರೆ ಹಾಗೂ ಬಸವಣ್ಣ ದೇವರ ದೇವಸ್ಥಾನ ಮುಂಭಾಗದಲ್ಲಿ ಸುಮಾರು ಹದಿನೈದು ಅಡಿ ಆಳದಲ್ಲಿ ಜೆಸಿಬಿ ಸಹಾಯದಿಂದ ಮಣ್ಣು ಅಗೆದಿದ್ದು, ಸುತ್ತಲು ಅಕ್ಕಿಕಾಳು ಮಂತ್ರಿಸಿ ನಿಂಬೆ ಹಾಗೂ ತಾಯತ ಇಟ್ಟು ಪೂಜೆ ಮಾಡಿದ್ದಾರೆ. ಈ ಬಗ್ಗೆ ಜಮೀನು ಮಾಲೀಕರ ಗಮನಕ್ಕೆ ಬಂದಾಗ ಸ್ಥಳೀಯರು ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ನಂತರ ತೋಡಿದ ಗುಂಡಿ ಮುಚ್ಚಲಾಗಿದೆ.

ಇದನ್ನೂ ಓದಿ:ಕನ್ನಡ ಭಾಷೆಯಲ್ಲಿದೆ ಉಜ್ವಲ ಶಕ್ತಿ

Advertisement

Udayavani is now on Telegram. Click here to join our channel and stay updated with the latest news.

Next