Advertisement

ಲಾಲು ಪುತ್ರರ ನಡುವೆ ಒಡಕು?

06:00 AM Jun 10, 2018 | |

ಪಾಟ್ನಾ: ಆರ್‌ಜೆಡಿಯಲ್ಲೀಗ ದಾಯಾದಿ ಕಲಹ ಶುರುವಾಗಿದೆಯೇ? ಲಾಲು ಪ್ರಸಾದ್‌ ಯಾದವ್‌ ಪುತ್ರರಾದ ತೇಜ್‌ ಪ್ರತಾಪ್‌ ಯಾದವ್‌ ಮತ್ತು ತೇಜಸ್ವಿ ಯಾದವ್‌ ಮಧ್ಯೆ ವೈಮನಸ್ಸುಂಟಾಗಿದೆಯೇ ಎಂಬ ಶಂಕೆ ಇದೀಗ ವ್ಯಕ್ತವಾಗಿದೆ. ತೇಜ್‌ ಪ್ರತಾಪ್‌ ಮಾಡಿರುವ ಟ್ವೀಟ್‌ವೊಂದು ಇಂಥ ಅನುಮಾನ ಮೂಡಿಸಿದೆ.

Advertisement

ಶನಿವಾರ ಟ್ವೀಟ್‌ ಮಾಡಿಕೊಂಡಿರುವ ತೇಜ್‌ ಪ್ರತಾಪ್‌ ಯಾದವ್‌, “ನಾನು ಯಾವುದೇ ಹುದ್ದೆಗೆ ಆಸೆ ಇಟ್ಟುಕೊಂಡಿರುವ ವ್ಯಕ್ತಿಯಲ್ಲ. ಅರ್ಜುನನಂತೆ ಹುದ್ದೆಯನ್ನು ತ್ಯಾಗ ಮಾಡಬಲ್ಲೆ. ನಾವೆಲ್ಲರೂ ರಾಜಕೀಯ ಮಾಡುತ್ತೇವೆ, ಆದರೆ, ಪ್ರಸ್ತುತ ಆರ್‌ಜೆಡಿಯಲ್ಲಿ ನಡೆಯುತ್ತಿರುವ ರಾಜಕೀಯವನ್ನು ನೋಡಿದರೆ, ಬಹಳ ಬೇಸರವಾಗುತ್ತಿದೆ. ಕೆಲವು ಸಮಾಜವಿರೋಧಿ ಶಕ್ತಿಗಳು ಪಕ್ಷದೊಳಕ್ಕೆ ಪ್ರವೇಶ ಪಡೆದಿದ್ದು, ಪಕ್ಷವನ್ನು ಹಾಳು ಮಾಡುತ್ತಿವೆ’ ಎಂದು ಹೇಳಿದ್ದಾರೆ. ಈ ಮೂಲಕ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸ ಲಾಗುತ್ತಿದೆ ಎಂದು ಪರೋಕ್ಷವಾಗಿ ನುಡಿದಿದ್ದಾರೆ.

ಇಂಥ ಸಮಾಜದ್ರೋಹಿ ಶಕ್ತಿಗಳನ್ನು ತೇಜಸ್ವಿಯೇ ಪಕ್ಷದೊಳಕ್ಕೆ ಬಿಟ್ಟುಕೊಂಡಿದ್ದಾರೆ ಎಂದೂ ತೇಜ್‌ ಆರೋ ಪಿಸಿದ್ದಾರೆ. ಟ್ವೀಟ್‌ ಹರಿದಾಡಿದ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ತೇಜ್‌, ಇದು ಸಮಾಜ ವಿರೋಧಿ ಕೃತ್ಯಗಳನ್ನು ಉದ್ದೇಶಿಸಿ ಮಾಡಿದ ಟ್ವೀಟ್‌. ಸುಖಾಸುಮ್ಮನೆ ವದಂತಿಗಳನ್ನು ಹಬ್ಬಿಸಿ ನನ್ನ ಮತ್ತು ತೇಜಸ್ವಿ ನಡುವೆ ಒಡಕು ಉಂಟುಮಾಡಬೇಡಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next