Advertisement

ಕಾಸರಗೋಡಿನ ಶ್ರೀ ಲಕ್ಷ್ಮಿ ಜಪಾನ್‌ ಸಾಕುರ ಎಕ್ಸ್‌ಚೇಂಜ್‌ ಪ್ರೋಗ್ರಾಂಗೆ ಆಯ್ಕೆ

05:11 PM May 14, 2019 | keerthan |

ಬದಿಯಡ್ಕ : ಪೆರಿಯ ನವೋದಯ ವಿದ್ಯಾಲಯದ 12ನೇ ತರಗತಿ ವಿದ್ಯಾರ್ಥಿನಿ ಶ್ರೀ ಲಕ್ಷ್ಮಿ ಅವರು ಜಪಾನ್‌ ದೇಶದ ಸಯನ್ಸ್‌ ಆಂಡ್‌ ಎಕ್ನಾಲಜಿ ವಿಭಾಗ ನಡೆಸುವ ಸಾಕುರ ಎಕ್ಸ್‌ಚೇಂಜ್‌ ಪ್ರೋಗ್ರಾಂಗೆ ಆಯ್ಕೆಗೊಂಡಿದ್ದಾರೆ.

Advertisement

ಶ್ರೀಲಕ್ಷ್ಮಿ ಅವರು ಪೆರಿಯ ನವೋದಯ ವಿದ್ಯಾಲಯದ ಜೀವಶಾಸ್ತ್ರ ಶಿಕ್ಷಕ ನವೀನ್‌ ಕುಮಾರ್‌-ಸುಮನಾ ಶೆಣೈ ದಂಪತಿ ಪುತ್ರಿ. ಮೇ 19 ರಿಂದ 25 ರವರೆಗೆ ಜಪಾನ್‌ನಲ್ಲಿ ನಡೆಯುವ ಪ್ರೋಗ್ರಾಂನಲ್ಲಿ ಅವರು ಭಾಗವಹಿಸಲಿದ್ದಾರೆ.

ಹೈದರಬಾದ್‌ ರೀಜನ್‌ನ 77 ವಿದ್ಯಾಲಯಗಳಿಂದ ಶ್ರೀಲಕ್ಷ್ಮಿ ಮಾತ್ರ ಆಯ್ಕೆಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next