Advertisement

Politics:ಬೀಗರಿಗೆ ಟಿಕೆಟ್‌ ತಪ್ಪಿಸಿ ಕಣಕ್ಕಿಳಿದ ಶೆಟ್ಟರ್‌ ಸ್ವಾರ್ಥಿ; ಹೆಬ್ಬಾಳ್ಕರ್‌

08:20 PM Mar 30, 2024 | Team Udayavani |

ಬೆಳಗಾವಿ: ಬೀಗರಿಗೆ ಸಿಗಬೇಕಿದ್ದ ಟಿಕೆಟ್‌ ಅನ್ನು ತಪ್ಪಿಸಿ  ಬೆಳಗಾವಿಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ  ಜಗದೀಶ್‌ ಶೆಟ್ಟರ್‌ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಬೆಳಗಾವಿಯ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

Advertisement

ಕಾಂಗ್ರೆಸ್‌ ಅಭ್ಯರ್ಥಿ, ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡ ಜನರಿಂದ ತಿರಸ್ಕರಿಸಲ್ಪಟ್ಟ ಶೆಟ್ಟರ್‌ ಬೆಳಗಾವಿಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಸತತ ಆರು ಬಾರಿ ಆರಿಸಿದ ಕ್ಷೇತ್ರದ ಜನತೆಯನ್ನೇ ಮರೆತ ಅವರಿಂದ ಬೆಳಗಾವಿ ಜನತೆ ಅಭಿವೃದ್ಧಿ ನಿರೀಕ್ಷಿಸುವುದು ಅಸಾಧ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next