Advertisement

Politics: ಲಕ್ಷ್ಮಣ ಸವದಿ-ನಾನು ಬಿಜೆಪಿಗೆ ಹೋಗಲ್ಲ: ಶಾಸಕ ರಾಜು ಕಾಗೆ

09:12 PM Jan 30, 2024 | |

ಕಾಗವಾಡ: ಮಾಜಿ ಸಿಎಂ ಜಗದೀಶ ಶೆಟ್ಟರ್‌ ಬಿಜೆಪಿಗೆ ವಾಪಸ್‌ ಹೋದ ಬಳಿಕ ರಾಜಕೀಯದಲ್ಲಿ ಹಲವು ಊಹಾಪೋಹಗಳು ಸೃಷ್ಟಿಯಾಗಿವೆ. ನನ್ನ ಆಪ್ತ ಸ್ನೇಹಿತ ಲಕ್ಷ್ಮಣ ಸವದಿ ಹಾಗೂ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಬಿಡುವುದಿಲ್ಲ ಎಂದು ಶಾಸಕ ರಾಜು ಕಾಗೆ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಡಿಸಿಸಿ ಬ್ಯಾಂಕ್‌ ಸಭೆಗೆ ಬಿಜೆಪಿ, ಕಾಂಗ್ರೆಸ್‌ ನಾಯಕರು ಒಟ್ಟಾಗಿ ಹೋಗಿದ್ದಾರೆ. ಆದರೆ ಲಕ್ಷ್ಮಣ ಸವದಿ ಬಿಜೆಪಿಗೆ ಹೋಗುವುದು ಊಹಾಪೋಹವಷ್ಟೇ.

Advertisement

ಜಗದೀಶ ಶೆಟ್ಟರ್‌ ನಮ್ಮ ಮನೆಗೆ ಊಟಕ್ಕೆ ಬಂದರೆ ನಾನು ಬಿಜೆಪಿ ಸೇರುತ್ತೇನೆ ಅಂತ ಅರ್ಥನಾ? ನಾನು, ಲಕ್ಷ್ಮಣ ಸವದಿ ಬಿಜೆಪಿ ಸೇರುವುದು ಸತ್ಯಕ್ಕೆ ದೂರ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಒಳ್ಳೆಯ ಆಡಳಿತ ನೀಡುತ್ತಿದ್ದೇವೆ. 135 ಜನ ಶಾಸಕರು ಪಕ್ಷದಿಂದ ಆಯ್ಕೆಯಾಗಿದ್ದಾರೆ. ಇಷ್ಟೆಲ್ಲ ಇರುವಾಗ ನಾವು ಮರಳಿ ಬಿಜೆಪಿಗೆ ಹೋಗಲು ಕಾರಣವೇನಿದೆ. ನಮ್ಮ ತಲೆಯಲ್ಲಿ ಯಾವುದೇ ಪಕ್ಷಾಂತರ ವಿಚಾರವೇ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next