Advertisement

ಪೊಲೀಸ್‌ ಆಯಕ್ತರ ಕಚೇರಿ ಬಳಿ ಲಕ್ಷಾಂತರ ರೂ. ಕಳ್ಳತನ: ಆರೋಪಿಗಳು ಪರಾರಿ

12:05 PM Jul 24, 2022 | Team Udayavani |

ಬೆಂಗಳೂರು: ಪೊಲೀಸ್‌ ಆಯುಕ್ತರ ಕಚೇರಿ ಸಮೀಪದಲ್ಲಿಯೇ ಕಾರಿನ ಗಾಜು ಹೊಡೆದು ಲಕ್ಷಾಂತರ ರೂ. ದೋಚಿರುವ ಘಟನೆ ನಡೆದಿದೆ.

Advertisement

ಕ್ಯಾಟರಿಂಗ್‌ ವ್ಯವಹಾರ ಮಾಡುವ ಲಕ್ಷ್ಮೀಶ ಎಂಬವರು ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲಕ್ಷ್ಮೀಶ ಮನೆ ಕಟ್ಟಲು ಸಾಲ ಪಡೆದುಕೊಂಡಿದ್ದರು. ಅದರ ಮಾಸಿಕ ಕಂತು ಕಟ್ಟಲು 3 ದಿನಗಳ ಹಿಂದೆ ಮಹದೇವರಪುರದ ಬ್ಯಾಂಕ್‌ಗೆ ಹೋಗಿದ್ದರು. ಆದರೆ, ಪಾನ್‌ಕಾರ್ಡ್‌ ಮರೆತು ಬಂದಿರುವುದು ಗೊತ್ತಾಗಿ, ವಾಪಸ್‌ ಮನೆಗೆ ಬರುವ ಮಾರ್ಗ ಮಧ್ಯೆ ಅಲಿ ಆಸ್ಕರ್‌ ರಸ್ತೆಯಲ್ಲಿರುವ ಮಾಪನ ಇಲಾಖೆಗೆ ಹೋಗಲು ಆಯುಕ್ತರ ಕಚೇರಿ ರಸ್ತೆಯಲ್ಲಿ ಕಾರು ಪಾರ್ಕಿಂಗ್‌ ಮಾಡಿ ಇಲಾಖೆಗೆ ಹೋಗಿದ್ದಾರೆ.

ಇದನ್ನೂ ಓದಿ: ಚಿತ್ತೂರು ಭೀಕರ ಅಪಘಾತ: ಇತ್ತೀಚೆಗಷ್ಟೇ ಶಿವಾಜಿನಗರ ಠಾಣೆಗೆ ವರ್ಗವಾಗಿದ್ದ ಪಿಎಸ್ ಐ ಅವಿನಾಶ್!

ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿರುವ ನಾಲ್ವರು ಆರೋಪಿಗಳು ಕಾರಿನ ಗಾಜು ಒಡೆದು ಕಾರಿನ ಸೀಟ್‌ ಮೇಲಿಟ್ಟಿದ್ದ 4.5 ಲಕ ರೂ. ದೋಚಿ ಪರಾರಿಯಾಗಿದ್ದಾರೆ. ಬಳಿಕ ಕಾರಿನ ಬಳಿ ಬಂದಾಗ ಗಾಜು ಒಡೆದಿದ್ದನ್ನು ನೋಡಿ, ಹಣದ ಬ್ಯಾಗ್‌ಗಾಗಿ ಎಲ್ಲೆಡೆ ಹುಡುಕಿದ್ದಾರೆ. ಕಳವು ಗೊತ್ತಾಗುತ್ತಿದ್ದಂತೆ ಠಾಣೆಗೆ ದೂರು ನೀಡಿದ್ದಾರೆ. ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ದ್ವಿಚಕ್ರವಾಹನದಲ್ಲಿ ಬಂದು ಕೃತ್ಯ ವೆಸಗಿರುವುದು ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next