Advertisement

ಲಕ್ಷ ದೀಪೋತ್ಸವ ಸಂಭ್ರಮ

10:56 AM Sep 30, 2018 | |

ಕಲಬುರಗಿ: ನೂತನ ವಿದ್ಯಾಲಯ ಮೈದಾನದಲ್ಲಿ ಶನಿವಾರ ಸಂಜೆ ಶ್ರೀ ಸತ್ಯಪ್ರಮೋದತೀರ್ಥರ ಜನ್ಮ ಶತಮಾನೋತ್ಸವ ನಿಮಿತ್ತ ವಿಶ್ವ ಮಧ್ವ ಮಹಾಪರಿಷತ್‌ ವತಿಯಿಂದ ಲಕ್ಷ ದೀಪೋತ್ಸವ ಆಯೋಜಿಸಲಾಗಿತ್ತು. ಮಹಾನಗರ ಸೇರಿದಂತೆ ಜಿಲ್ಲೆಯ ಸಾವಿರಾರು ಭಕ್ತರು ಪಾಲ್ಗೊಂಡು ದೀಪ ಬೆಳಗಿದರು.

Advertisement

ಲಕ್ಷ ದೀಪೋತ್ಸವಕ್ಕೂ ಮುನ್ನ ಬ್ರಹ್ಮಪುರ ಉತ್ತರಾದಿ ಮಠದ ಶ್ರೀ ವಿಠuಲ ರುಕ್ಮಿಣಿ ಮಂದಿರದಿಂದ ನೂತನ ವಿದ್ಯಾಲಯ ಮೈದಾನದವರೆಗೆ ನಡೆದ ಶ್ರೀ ಸತ್ಯಪ್ರಮೋದತೀರ್ಥರ ಪಾದುಕೆ ಮೆರವಣಿಗೆ ಗಮನ ಸೆಳೆಯಿತು. ಈ ವೇಳೆ ಶ್ರೀ ಸತ್ಯಪ್ರಮೋದತೀರ್ಥ ಮಹಾರಾಜ ಕಿ ಜೈ, ಹರಿಸರ್ವೋತ್ತಮ ವಾಯು ಜೀವೋತ್ತಮ, ಉತ್ತರಾದಿ ಮಠಕ್ಕೆ ಜಯವಾಗಲಿ ಎನ್ನುವ ಘೋಷಣೆಗಳು ಮೊಳಗಿದವು. 

ಲಕ್ಷ ದೀಪೋತ್ಸವ ಹಾಗೂ ಮೆರವಣಿಗೆಯಲ್ಲಿ ಪಂ| ರಂಗಾಚಾರ್ಯ ಗುತ್ತಲ, ಉತ್ತರಾದಿ ಮಠದ ದಿವಾನ ಪಂ| ಶಶೀಧರಾಚಾರ್ಯ, ಹಿರಿಯ ವಿದ್ವಾಂಸ ಪಂ| ರಾಮಾಚಾರ್ಯ ಅವಧಾನಿ, ಪಂ| ಗೋಪಾಲಾಚಾರ್ಯ ಅಕಮಂಚಿ, ಪಂ| ಹಣಮಂತಾಚಾರ್ಯ ಸರಡಗಿ, ಪಂ| ವಿನೋದಾಚಾರ್ಯ ಸರಡಗಿ, ಪಂ| ವಿಷ್ಣುದಾಸಾಚಾರ್ಯ ಖಜೂರಿ, ಪಂ| ಡಾ| ಗುರುಮಧ್ವಾಚಾರ್ಯ ನವಲಿ, ಪಂ| ಗಿರೀಶಾಚಾರ್ಯ ಕೊಪ್ಪರ, ಪಂ| ಪ್ರಸನ್ನಾಚಾರ್ಯ ಜೋಶಿ, ಪಂ| ಗಿರೀಶಾಚಾರ್ಯ ಅವಧಾನಿ, ಪಂ| ಭೀಮಸೇನಾಚಾರ್ಯ ಜೋಶಿ, ಪಂ| ಶ್ರೀನಿವಾಸಾಚಾರ್ಯ ಪದಕಿ, ಮಠಾಧಿಕಾರಿ ರಾಮಾಚಾರ್ಯ ಘಂಟಿ, ಆನಂದ ತೀರ್ಥಾಚಾರ, ವಿಶ್ವ ಮಧ್ವ ಮಹಾಪರಿಷತ್‌ನ ಅರವಿಂದ ನವಲಿ, ರವಿ ಲಾತೂರಕರ್‌, ಡಾ| ಗಿರೀಶಾಚಾರ್ಯ ಗಲಗಲಿ, ವಿನುತ್‌ ಕುಲಕರ್ಣಿ, ರಘೋತ್ತಮ ಘಂಟಿ, ಜಯತೀರ್ಥ ಜೋಶಿ, ಅನಂತ ಕಾಮೇಗಾಂವ, ಅಭಿಜಿತ್‌ ದೇಶಮುಖ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next