Advertisement

ಕೆರೆ ಒತ್ತುವರಿ ವರದಿ ಬಜೆಟ್‌ ಅಧಿವೇಶನದಲ್ಲಿ ಮಂಡನೆ

12:26 PM Mar 14, 2017 | |

ಬೆಂಗಳೂರು: ಕೆರೆ ಒತ್ತುವರಿ ತೆರವು ಸದನ ಸಮಿತಿಯ ವರದಿ ಸಿದ್ದವಾಗಿದ್ದು, ಸಮಿತಿಯ ಸದಸ್ಯರ ಜೊತೆ ಚರ್ಚಿಸಿ ಇದೇ ಬಜೆಟ್‌ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಸ್ಪೀಕರ್‌ ಕೆ.ಬಿ. ಕೋಳಿವಾಡ ಹೇಳಿದ್ದಾರೆ. 

Advertisement

ಮಾಜಿ ಶಾಸಕರ ಪರಿಷತ್‌ ಶಾಸಕರ ಭವನದಲ್ಲಿ ಮಾಜಿ ಶಾಸಕ ಯು.ಭೂಪತಿ ಸ್ಮರಾಣಾರ್ಥ ಹಮ್ಮಿಕೊಂಡಿದ್ದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರದಲ್ಲಿ  ಮಾತನಾಡಿದ ಅವರು, “ಕೆರೆ ಒತ್ತುವರಿ ಸಮಿತಿಯ ವರದಿ ಈಗಾಗಲೇ ಸಿದ್ಧಗೊಂಡಿದೆ.

ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲು ಸದಸ್ಯರ ಸಭೆ ಕರೆಯಲಾಗಿತ್ತು. ಆದರೆ, ಸದಸ್ಯರ ಕೊರತೆಯಿಂದ ಸಭೆ ನಡೆಸಲು ಆಗಲಿಲ್ಲ. ಬಜೆಟ್‌ ಅಧಿವೇಶನದ ಸಂದರ್ಭದಲ್ಲೇ ಶಾಸಕರ ಸಭೆ ಕರೆದು ಚರ್ಚಿಸಿ, ಸದಸ್ಯರು ಒಪ್ಪಿಗೆ ನೀಡಿದರೆ, ಇದೇ ಅಧಿವೇಶನದಲ್ಲಿಯೇ ವರದಿ ಒಪ್ಪಿಸಲಾಗುವುದು,” ಎಂದು ಅವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next