ಸ್ವತ್ಛ ಭಾರತ ಅಭಿಯಾನದ ಹಿನ್ನೆಲೆಯಲ್ಲಿ ಕೊಪ್ಪಳ ಜಿಪಂ ಬಹಿರ್ದೆಸೆ ಮುಕ್ತವಾಗಿಸಲು ಸಾರ್ವಜನಿಕರನ್ನು ಮನವೊಲಿಸಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಜಾಗೆ ತೋರಿಸಿದರೆ ಅಲ್ಲಿಯೇ ಶಾಚಾಲಯ ನಿರ್ಮಿಸಲಾಗುತ್ತಿದೆ. ಹೀಗಿರುವಾಗ ಗುಮಗೇರಾ ಮಹಿಳೆ ಸ್ವಂತ ಹಣದಲ್ಲೇ ಶೌಚಾಲಯ ನಿರ್ಮಿಸಿಕೊಂಡಿರುವುದು ಹುಬ್ಬೇರಿಸುವಂತೆ ಮಾಡಿದೆ.
Advertisement
ಶೌಚಾಲಯ ನಿರ್ಮಿಸಿಕೊಳ್ಳುವುದು ರತ್ಮಮ್ಮಳದ್ದು ಬಹುದಿನದ ಕನಸು. ಕಡು ಬಡತನದಿಂದ ಅದು ಸಾಕಾರಗೊಂಡಿರಲಿಲ್ಲ. ಶೌಚಾಲಯ ನಿರ್ಮಿಸಿಕೊಳ್ಳದಿದ್ದರೆ ಪಡಿತರ ಚೀಟಿ ರದ್ದಾಗುತ್ತಿದೆ ಎಂಬ ಸುದ್ದಿ ಕಿವಿಗೆ ಬಿದ್ದಿದ್ದೇ ತಡ, 10 ಸಾವಿರ ರೂ. ಸಾಲ ಪಡೆದು ಶೌಚಾಲಯ ನಿರ್ಮಿಸಲು ಮುಂದಾಗಿದ್ದಾರೆ. ನೆಲಗಟ್ಟಿಯಾಗಿದ್ದರಿಂದ ಶೌಚಾಲಯ ಫಿಟ್ ಅಗೆಯಲು ಕೆಲಸಗಾರರು ಹಿಂಜರಿದಾಗ ತಾನೇ ಗುದ್ದಲಿ, ಹಾರೆ, ಸಲಿಕೆಯೊಂದಿಗೆ ಅಗೆದು ರಿಂಗ್ ಸಹ ಇಳಿಸಿದ್ದಾರೆ. ಕೂಲಿಯಾಳಾಗಿ ದುಡಿದ ಅನುಭವದ ಹಿನ್ನೆಲೆಯಲ್ಲಿ ಶೌಚಾಲಯ ಕಟ್ಟಡ ನಿರ್ಮಿಸಿ ಪ್ಲಾಸ್ಟರ್ ಕೆಲಸ ನಿರ್ವಹಿಸಿ ಶೌಚಾಲಯ ಪೂರ್ತಿಗೊಳಿಸಿದ್ದಾರೆ!
–ಡಾ.ಡಿ.ಮೋಹನ್, ತಾಪಂ ಇಒ
Related Articles
-ರತ್ಮಮ್ಮ ಚಂದ್ರಗಿರಿ , ಶೌಚಾಲಯ ನಿರ್ಮಿಸಿಕೊಂಡ ಮಹಿಳೆ
Advertisement
– ಮಂಜುನಾಥ ಮಹಾಲಿಂಗಪುರ