Advertisement

ಸೊಳ್ಳೆಪುರ ಗ್ರಾಮಕ್ಕೆ ಅಭಿವೃದ್ಧಿ ಮರೀಚಿಕೆ

02:04 PM Nov 26, 2020 | Suhan S |

ಮದ್ದೂರು: ತಾಲೂಕಿನ ವಳಗೆರೆಹಳ್ಳಿ ಗ್ರಾಪಂ ವ್ಯಾಪ್ತಿಯ ಸೊಳ್ಳೆಪುರ ಗ್ರಾಮಕ್ಕೆ ಸೌಲಭ್ಯ ಕಲ್ಪಿಸುವಲ್ಲಿ ವಿಫ‌ಲವಾಗಿರುವ ಅಧಿಕಾರಿಗಳ ಹಾಗೂ ಚುನಾಯಿತ ಪ್ರತಿನಿಧಿಗಳ ವಿರುದ್ಧ ಸ್ಥಳೀಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಮುಂಬರುವ ಗ್ರಾಪಂ ಚುನಾವಣೆ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

Advertisement

ತಾಲೂಕು ಕೇಂದ್ರದಿಂದ 8 ಕಿ.ಮೀ. ದೂರದಲ್ಲಿರುವ ಸೊಳ್ಳೆಪುರ ಗ್ರಾಮಕ್ಕೆ 50 ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿದೆ. ಸರ್ಕಾರದ ಯಾವುದೇ ಯೋಜನೆಗಳು ಅರ್ಹ ಫ‌ಲಾನುಭವಿಗಳಿಗೆ ತಲುಪಿಸದೆ ಗ್ರಾಮ ಹಾಳುಕೊಂಪೆಯಾಗಿದೆ. ಎರಡು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮವು, ಹೆಚ್ಚು ಕೃಷಿಕರನ್ನು ಹೊಂದಿದೆ. 1300 ಮತದಾರರಿದ್ದು, ಚುನಾವಣೆ ವೇಳೆ ಗ್ರಾಮಕ್ಕೆ ಭೇಟಿ ನೀಡುವ ಶಾಸಕರು, ಸಂಸದರು ಹಾಗೂ ಜಿಪಂ, ತಾಪಂ ಹಾಗೂ ಗ್ರಾಪಂ ಸದಸ್ಯರು, ಅಧಿಕಾರಿಗಳು ಚುನಾವಣೆ ಬಳಿಕ ಇತ್ತ ತೆಲೆಹಾಕಿಯೂ ಮಲಗುವುದಿಲ್ಲ.

ಸಮಸ್ಯೆಗಳ ಆಗರ: ಗ್ರಾಮದಲ್ಲಿ ಹೊಲ, ಗದ್ದೆಗಳಿಗೆ ತೆರಳುವ ರಸ್ತೆಗಳು ಕೆಸರು ಗದ್ದೆಯಾಗಿಮಾರ್ಪಟ್ಟಿವೆ. ಗ್ರಾಮದ ರಸ್ತೆಯುದ್ಧಕ್ಕೂ ತಿಪ್ಪೆಗುಂಡಿಗಳ ದರ್ಶನ, ಹೂಳು ತುಂಬಿರುವ ಚರಂಡಿ, ಇಕ್ಕೆಲಗಳಲ್ಲಿ ಗಿಡಗಂಟೆಗಳು ಬೆಳೆದು ವಿಷಜಂತುಗಳ ವಾಸಸ್ಥಾನವಾಗಿದೆ. ಗ್ರಾಮದಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು, ತ್ಯಾಜ್ಯ ನೀರು ರಸ್ತೆಯಲ್ಲೇ ಹರಿದು ದುರ್ವಾಸನೆ ಬೀರುವುದಲ್ಲದೆ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ. ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಜತೆಗೆ ವಿದ್ಯುತ್‌ವ್ಯವಸ್ಥೆ, ಬೀದಿದೀಪ, ಕುಡಿಯುವ ನೀರು, ರಸ್ತೆ, ಚ‌ರಂಡಿ, ಇನ್ನಿತರೆ ಮೂಲ ಸೌಲಭ್ಯಗಳು ಇಲ್ಲದಂತಾಂಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಿಂದ ಗ್ರಾಮ ದೂರ ಉಳಿದಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಕೈಬರಹದಲ್ಲೇ ಇವೆ ರೈತರ ದಾಖಲೆಗಳು: ಸೊಳ್ಳೆಪುರ ಗ್ರಾಮವು ಕೇವಲ ಮತದಾನಕಷ್ಟೇ ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡಲಿದ್ದು ಗ್ರಾಮದ ಜನತೆಯ ಬಹುಪಾಲು ಕೃಷಿ ಭೂಮಿ ಮಂಡ್ಯ ತಾಲೂಕಿನ ಹೊನ್ನಗ ‌ಳ್ಳಿ ಮಠ ವ್ಯಾಪ್ತಿಗೆ ಒಳಪಡಲಿದ್ದು ಜಮೀನಿನ ದಾಖಲೆಗಳು, ಗಣಕೀಕರಣ ಕಾಣದೆ ಕೈಬರಹ ದಾಖಲೆಗಳಲ್ಲೇ ಉಳಿದಿರುವುದು ಅಚ್ಚರಿಗೆ ‌ ಕಾರಣವಾಗಿದೆ. ಆರ್‌ಟಿಸಿ, ಮೂಲ ದಾಖಲೆಗಳು, ಇನ್ನಿತರೆ ಕಾಗದ ಪತ್ರಗಳು ಗಣಕೀಕರಣ ಮಾಡುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫ‌ಲರಾಗಿದ್ದಾರೆ ಎಂದರು.

ಗ್ರಾಮಸ್ಥರು ಜಮೀನುಗಳ ದಾಖಲೆಗಳನ್ನುಪಡೆಯಲು, ವಿಧವಾ, ವೃದ್ಧಾಪ್ಯ, ಅಂಗವಿಕಲ, ಪಿಂಚಣಿವ್ಯವಸ್ಥೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದಯೋಜನೆಗಳನ್ನು ಪಡೆಯಲು ತಾಲೂಕು ಕೇಂದ್ರಕ್ಕೆ ಪ್ರತಿನಿತ್ಯ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ: ಜಿಪಂ, ತಾಪಂ ಹಾಗೂ ಸರ್ಕಾರದ ಗಮನಸೆಳೆದು ಪ್ರಸಕ್ತ ಎದುರಾಗುವ ಗ್ರಾಪಂ ಚುನಾವಣೆ ವೇಳೆ ಮತದಾನ ಬಹಿಷ್ಕರಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನಾಗರಿಕರಲ್ಲಿ ಪರ- ವಿರೋಧ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಗ್ರಾಮಕ್ಕೆ ಕಲ್ಪಿಸಿ ಮಾದರಿ ಗ್ರಾಮವಾಗಿಸಬೇಕೆಂಬುದು ಸ್ಥಳೀಯರ ಒಕ್ಕೊರಲಿನ ತೀರ್ಮಾನವಾಗಿದೆ.

ಸ್ಥಳೀಯರ ಆಕ್ರೋಶ :  ಕೇಂದ್ರ ಸರ್ಕಾರದ ಉದ್ಯೋಗ ಖಾತರಿ ಯೋಜನೆಯಡಿ ಅವಕಾಶವಿದ್ದರೂ ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಚಕಾರವೆತ್ತದೆ ಮೌನ ವಹಿಸಿದ್ದಾರೆ. ಈವರೆಗೂ ಪಂಚಾಯಿತಿಯಿಂದ ಮನೆ, ನಿವೇಶನಗಳ ಹಕ್ಕುಪತ್ರ ವಿತರಣೆ ಮಾಡದೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಶಾಸಕರು, ಸಂಸದರು ಜಿಪಂ ಸದಸ್ಯರ ನಿಧಿಯಿಂದ ಅನುದಾನ ಬಿಡುಗಡೆ ಮಾಡಿಸಿ ಯಾವುದೇ ಅಭಿವೃದ್ಧಿಕಾರ್ಯಗಳಿಗೆ ಚಾಲನೆ ನೀಡದಿರುವುದು, ಸ್ಥಳೀಯ ನಾಯಕರು ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯಧೋರಣೆ ಸ್ಥಳೀಯರ ಆಕ್ರೋಶಕ್ಕೆಕಾರಣವಾಗಿದೆ. ಹೀಗಾಗಿ ಮುಂದಿನ ಚುನಾವಣೆ ಬಹಿಷ್ಕರಿಸುವ ನಿಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

50 ವರ್ಷಗಳಿಂದಲೂ ವಾಸಿಸುತ್ತಿರುವ ಸ್ಥಳೀಯ ನಿವಾಸಿಗಳಿಗೆಜಿಲ್ಲಾಡಳಿತ ಹಕ್ಕುಪತ್ರ ನೀಡುವ ಮೂಲಕ ಸರ್ಕಾರದ ಯೋಜನೆಪಡೆಯಲುಅವಕಾಶಕಲ್ಪಿಸಬೇಕಾಗಿದ್ದು, ಗ್ರಾಮಕ್ಕೆ ಸೌಲಭ್ಯಕಲ್ಪಿಸಿಮಾದರಿ ಗ್ರಾಮವನ್ನಾಗಿಸಲು ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳುಇತ್ತ ಗಮನ ಹರಿಸಬೇಕಗಿದೆ. ಸೋ.ಸಿ. ಪ್ರಕಾಶ್‌, ಸೊಳ್ಳೆಪುರ ನಿವಾಸಿ

ಸೊಳ್ಳೆಪುರಗ್ರಾಮ ಸೌಕರ್ಯಗಳಿಂದ ವಂಚಿತವಾಗಿರುವ ಬಗ್ಗೆ ಈಗಷ್ಟೇ  ಗಮನಕ್ಕೆ ಬಂದಿದ್ದು,ಖುದ್ದು ಸ್ಥಳಕ್ಕೆಭೇಟಿ ನೀಡಿಪರಿಶೀಲಿಸಲಾಗುವುದು.ಕ್ರಮವಹಿಸಿ ಗ್ರಾಮಾಭಿವೃದ್ಧಿಗೆ ಒತ್ತು ನೀಡಲಾಗುವುದು. ಮುನಿರಾಜು, ತಾಪಂ ಇಒ

 

ಎಸ್‌.ಪುಟ್ಟಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next