Advertisement
ಜತೆಗೆ, ರಾಜ್ಯದಲ್ಲಿ 21 ಲಕ್ಷ ಕಾರ್ಮಿಕರು ನೋಂದಣಿಯಾಗಿದ್ದರೂ ಕಾರ್ಮಿಕ ಕಲ್ಯಾಣ ಮಂಡಳಿ ಮೂಲಕ ಸಂಗ್ರಹಿಸುವ 8500 ಕೋಟಿ ರೂ. (ಸೆಸ್) ಬಳಕೆಯಾಗಿಲ್ಲ. ಹೀಗಾಗಿ, ಆ ಮೊತ್ತ ದಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ವಿಶೇಷ ಕ್ಷೇಮಾಭಿ ವೃದ್ಧಿ ಯೋಜನೆ ರೂಪಿಸಲು ನಿರ್ಧರಿಸಿದೆ. ಈಗಾಗಲೇ ಕಟ್ಟಡ ಕಾರ್ಮಿಕರು, ಕಾರ್ಮಿಕ ಸಂಘಟನೆಗಳ ಮುಖಂಡರು, ಇಲಾಖೆಯ ಅಧಿಕಾರಿಗಳು, ಕಟ್ಟಡ ಕೈಗಾರಿಕಾ ಕ್ಷೇತ್ರದ ದಿಗ್ಗಜರು, ನಿರ್ಮಾಣ ಕ್ಷೇತ್ರದ ಭಾಗೀದಾರರ ಸಭೆ ನಡೆಸಿ ಈ ಕುರಿತು ಮಾಹಿತಿ ವಿನಿಯಮ ಮಾಡಿಕೊಂಡಿರುವ ಕಾರ್ಮಿಕ ಇಲಾಖೆ ಸಾವಿರಾರು ಕೋಟಿ ರೂ. ಸೆಸ್ ಹಣ ಕಾರ್ಮಿಕರಿಗೆ ಸೌಲಭ್ಯ-ಸವಲತ್ತು ರೂಪದಲ್ಲಿ ವಿನಿಯೋಗಿಸುವ ಸಂಬಂಧ ಕಾರ್ಯಯೋಜನೆ ಸಿದ್ಧಪಡಿಸಿದೆ.
Related Articles
Advertisement
ವಿಶೇಷ ವ್ಯವಸ್ಥೆ: ಮಹಿಳಾ ಕಾರ್ಮಿಕರು ರಾತ್ರಿ ವೇಳೆಯಲ್ಲಿ ಮನೆ ತಲುಪುವುದು ತಡವಾದರೆ ಕೆಲಸದ ಸ್ಥಳದಿಂದ ಮನೆವರೆಗಿನ ಅವರ ಚಲನವಲನ ಕುರಿತು ತಂದೆ-ತಾಯಿಗೆ ಮಾಹಿತಿ ನೀಡುವ ಹೊಸ ವ್ಯವಸ್ಥೆಯನ್ನೂ ಕಾರ್ಮಿಕ ಇಲಾಖೆ ಮಾಡುತ್ತಿದೆ. ಅದಕ್ಕಾಗಿಯೇ ವಿಶೇಷ ಆ್ಯಪ್ ಸಿದ್ಧಪಡಿಸಿದೆ. ಮಹಿಳಾ ಕಾರ್ಮಿಕರು ಹಾಗೂ ಅವರ ತಂದೆ ಅಥವಾ ತಾಯಿ ಅದರಡಿ ನೋಂದಣಿಯಾಗ ಬಹುದು. ತಮ್ಮ ಮಗಳು ಕೆಲಸ ಬಿಟ್ಟ ನಂತರ ಯಾವ ಮಾರ್ಗದಲ್ಲಿ ಬರುತ್ತಿದ್ದಾಳೆ, ಎಲ್ಲಿದ್ದಾಳೆ ಎಂಬುದರ ಮಾಹಿತಿಯೂ ಅದರಡಿ ಸಿಗುತ್ತದೆ. ಅಪಾಯ ಸಂದರ್ಭದಲ್ಲಿ ಇಲಾಖೆಗೆ ಮಾಹಿತಿ ರವಾನಿಸಬಹುದು. ಆ ಮಾಹಿತಿ ಸ್ಥಳೀಯ ಪೊಲೀಸ್ ಠಾಣೆಗೆ ತಲುಪುತ್ತದೆ ಎಂದು ತಿಳಿಸುತ್ತಾರೆ.
ಲಕ್ಷಾಂತರ ಕುಟುಂಬಗಳ ಸಮೂಹ ಹೊಂದಿ ರುವ ಕಾರ್ಮಿಕ ಇಲಾಖೆಗೆ ಕಾಯಕಲ್ಪ ನೀಡಲು ತೀರ್ಮಾನಿಸಲಾಗಿದೆ. ಎಲ್ಲ ವಲಯದ ಕಾರ್ಮಿಕರ ಬಗ್ಗೆ ಮಾಹಿತಿ ಸಂಗ್ರಹಿಸಿ ಅವರಿಗೆ ಸರ್ಕಾರದಿಂದ ಲಭ್ಯವಿರುವ ಸಾಮಾಜಿಕ ಭದ್ರತಾ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಿ ಅವರ ಹೆಸರು ನೋಂದಾಯಿಸಿ ಜತೆಗೆ ಅವರು ಕೆಲಸದ ಸ್ಥಗಳಲ್ಲಿ ಎದುರಿಸುತ್ತಿರುವ ಸಮಸ್ಯೆ-ಸವಾಲು ಅರಿತು ಪರಿಹಾರ ಕಲ್ಪಿಸಲು “ಆಶಾದೀಪ’ ಹೆಲ್ಫ್ಲೈನ್ ಪ್ರಾರಂಭಿಸಲಾಗುತ್ತಿದೆ. ಶುಲ್ಕ ರಹಿತ ಕರೆ ಮಾಡಬಹುದು, ವಾಟ್ಸ್ಅಪ್ ಮೂಲಕವೂ ತಮ್ಮ ದೂರು ದಾಖಲಿಸಬಹುದು. ಇದು ಕಾರ್ಮಿಕರ ಪಾಲಿಗೆ ವರದಾನವಾಗಲಿದೆ. -ಎಸ್.ಸುರೇಶ್ಕುಮಾರ್, ಕಾರ್ಮಿಕ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ * ಎಸ್.ಲಕ್ಷ್ಮಿನಾರಾಯಣ