Advertisement

ಕುಷ್ಟಗಿ ಪೊಲೀಸರ ಕಾರ್ಯಾಚರಣೆ: ಶ್ರೀಗಂಧ ಕಳ್ಳರ ಬಂಧನ, ಸೊತ್ತುಗಳು ವಶ

07:58 PM Jun 20, 2023 | Team Udayavani |

ಕುಷ್ಟಗಿ: ಕುಷ್ಟಗಿ, ತಾವರಗೇರಾ, ಹನುಮಸಾಗರ ಹಾಗೂ ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೈಸರ್ಗಿಕವಾಗಿ ಬೆಳೆದ ಶ್ರೀಗಂಧ ಮರಗಳನ್ನು ಕಡಿದು, ಲಕ್ಷಾಂತರ ರೂಗೆ ಮಾರುತ್ತಿದ್ದ ಕಳ್ಳರ ಜಾಲವನ್ನು ಕುಷ್ಟಗಿ ಪೊಲೀಸರು ಪತ್ತೆ ಮಾಡಿದ್ದು, ನಾಲ್ವರನ್ನು ಬಂಧಿಸಿ 3 ಲಕ್ಷ ರೂ. ಮೌಲ್ಯದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಆರೋಪಿಗಳಾದ ವಣಗೇರಾ ಗ್ರಾಮದ ಹನಮಪ್ಪ ಭಜಂತ್ರಿ, ಶಿವಪ್ಪ ಭಜಂತ್ರಿ ಶ್ರೀಗಂಧ ಮರಗಳನ್ನು ಕಡಿದು ತುಂಡುಗಳಾಗಿ ಮಾಡಿ ದೋಟಿಹಾಳ ಗ್ರಾಮದ ಹನಮಂತಪ್ಪ ಬಸಪ್ಪ ಜುಮ್ಲಾಪೂರ ಮಾರಾಟ ಮಾಡಿದ್ದಾರೆ. ಇದನ್ನು ವಿಜಯಪುರದ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ಶಶಿಕುಮಾರ ರೂಢಗಿಗೆ ಮಾರಾಟ ಮಾಡಿರುವುದಾಗಿ ಪೊಲೀಸರ ವಿಚಾರಣೆ ವೇಳೆಯಲ್ಲಿ ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಸದರಿ ಆರೋಪಿಗಳಿಗೆ ಸಹಾಯ ಮಾಡಿದ್ದ ದೋಟಿಹಾಳ ಮೂಲದ ಮಂಜುನಾಥ ಹನಮವ್ವ ಮಾದರ, ಚಂದ್ರಪ್ಪ ಹನಮವ್ವ ಮಾದರ, ಈರಣ್ಣ ಸಂಗಪ್ಪ ಕುಂಬಾರ, ಸಣ್ಣೆಪ್ಪ ಗಿಡ್ಡಪ್ಪ ಮಾದರ ಪರಾರಿಯಾಗಿದ್ದಾರೆ.

ಈ ಪ್ರಕರಣದಲ್ಲಿ ಕುಷ್ಟಗಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಹನುಮಸಾಗರ ಪಿಎಸೈ ಅಶೋಕ ಬೇವೂರು, ಎಎಸೈಗಳಾದ ವಸಂತ, ಸಿದ್ರಮಪ್ಪ, ವಿರುಪಾಕ್ಷಿ, ಮಲ್ಲಪ್ಪ, ಗುಂಡಪ್ಪ, ಎಎಸೈ ದುರಗಪ್ಪ ಹಿರೇಮನಿ, ವಿರುಪಾಕ್ಷಿ, ಪರಶುರಾಮ್ ಇವರನ್ನು ಒಳಗೊಂಡ ತಂಡಕ್ಕೆ ವಿಶೇಷ ಬಹುಮಾನಕ್ಕೆ ಕೊಪ್ಪಳ ಜಿಲ್ಲಾ ಎಸ್ಪಿ ಅವರಿಗೆ ಶಿಫಾರಸ್ಸು ಮಾಡುವುದಾಗಿ ಡಿವೈಎಸ್ಪಿ ರುದ್ರೇಶ ಮಾಹಿತಿ ನೀಡಿದರು.

ಪತ್ತೆ ಹಚ್ಚಿದ್ದು ಹೀಗೆ: ದೋಟಿಹಾಳ ಗ್ರಾಮದ ಹನಮಂತಪ್ಪ ಬಸಪ್ಪ ಜುಮ್ಲಾಪೂರ ಈತ ಶ್ರೀಗಂಧ ಖರೀಧಿಸಿ ಮಾರಾಟ ಮಾಡುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಾಚರಣೆ ಆರಂಭಿಸಿದ್ದರು. ಮೊದಲಿಗೆ ಹನಮಪ್ಪ ಜುಮ್ಲಾಪೂರ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಶ್ರೀಗಂಧದ ಮರಗಳ್ಳರು ವಣಗೇರಾ ಗ್ರಾಮದ ರಾಜಪ್ಪ ಭಜಂತ್ರಿ, ಶಿವಪ್ಪ ಭಜಂತ್ರಿಯನ್ನು ವಕ್ಕಂದುರ್ಗದಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು. ನಂತರ ಶ್ರೀಗಂಧ ಖರೀಧಿಸಿದ್ದ ವಿಜಯಪುರ ಜಿಲ್ಲೆ ಕಾರಜೋಳ ಗ್ರಾಮದ ಶಶಿಕುಮಾರ ರೂಢಗಿಯನ್ನು ಬಂಧಿಸಲಾಯಿತು. ಸದರಿ ಪ್ರಕರಣದಲ್ಲಿ ದೊಡ್ಡ ಜಾಲವೇ ಇದ್ದು ಇನ್ನಷ್ಟು ಆರೋಪಿಗಳು ಬಂಧನವಾಗುವ ಸಾಧ್ಯತೆಗಳಿವೆ.

ಈ ಭಾಗದಲ್ಲಿ ದೀರ್ಘಾವಧಿ ಬೆಳೆಯಾಗಿ ರೈತರು ಶ್ರೀಗಂಧ ಅಲ್ಲಲ್ಲಿ ಬೆಳೆಯುತ್ತಿದ್ದು, 15ರಿಂದ 20 ವರ್ಷ ಬೆಳೆಸಿದ ಶ್ರಮವನ್ನು ಶ್ರೀಗಂಧ ಕಳ್ಳರು ಕೆಲವೇ ನಿಮಿಷಗಳಲ್ಲಿ ಕಡಿದು ಮಾರಾಟಮಾಡುತ್ತಿದ್ದಾರೆ. ಅಲ್ಲದೆ ಶ್ರೀಗಂಧದ ಕೆಚ್ಚು ಮಾರಿ ಲಕ್ಷಾಂತರ ರೂ. ಗಳಿಸುವ ಧಂಧೆಗೆ ಇಳಿಯುವವರನ್ನು ಮಟ್ಟ ಹಾಕಲು, ಈ ಪ್ರಕರಣಗಳಲ್ಲಿ ಸಿಕ್ಕ ಆರೋಪಿಗಳ ಮೇಲೆ ಎಂ.ಓ.ಬಿ. ಪ್ರಕರಣ ದಾಖಲಿಸಲಾಗುವುದು.
– ರುದ್ರೇಶ ಉಜ್ಜನಕೊಪ್ಪ ಡಿವೈಎಸ್ಪಿ ಗಂಗಾವತಿ

Advertisement

ಇದನ್ನೂ ಓದಿ: Shivamogga: ಅಪ್ರಾಪ್ತನಿಗೆ ಬೈಕ್ ಕೊಟ್ಟ ತಪ್ಪಿಗೆ ಬೈಕ್ ಮಾಲೀಕನಿಗೆ 20 ಸಾವಿರ ರೂ. ದಂಡ

Advertisement

Udayavani is now on Telegram. Click here to join our channel and stay updated with the latest news.

Next