Advertisement

Kustagi: ಕುಸಿದ ಚರಂಡಿ ಸ್ಲ್ಯಾಬ್… ತೊಂದರೆ ಅನುಭವಿಸುತ್ತಿರುವ ಜನಸಾಮಾನ್ಯರು

03:24 PM Jan 29, 2024 | Team Udayavani |

ಕುಷ್ಟಗಿ: ಕುಷ್ಟಗಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಗೆ ಹೊಂದಿಕೊಂಡಿರುವ ಕೃಷ್ಣಗಿರಿ ಕಾಲೋನಿ ಸಂಪರ್ಕಿಸುವ ಚರಂಡಿ ಸ್ಲ್ಯಾಬ್ ಕುಸಿದಿದ್ದು ಜನಸಾಮಾನ್ಯರಿಗೆ ನಿತ್ಯ ತೊಂದರೆಗೆ ಕಾರಣವಾಗಿದೆ.

Advertisement

ಈ ಚರಂಡಿ ಸ್ಲ್ಯಾಬ್ ಮೇಲೆ ಅತಿಭಾರ ವಾಹನಗಳ‌ ಓಡಾಟ ಪರಿಣಾಮ ಚರಂಡಿ ಸ್ಲ್ಯಾಬ್ ಕುಸಿದಿದೆ. ಸ್ಲ್ಯಾಬ್ ಸಿಮೆಂಟ್ ಕಾಂಕ್ರೀಟ್ ಅಂಶ ಉಳಿದಿದ್ದು, ರಾಡ್(ಕಬ್ಬಿಣ) ತೆರೆದುಕೊಂಡಿದೆ. ಹಗಲಿನ ವೇಳೆ ದುಸ್ಥಿತಿಯ ಚರಂಡಿ ಸ್ಲ್ಯಾಬ್ ದಾಟಿಕೊಂಡಲು ಹೋಗಲು ಸಾದ್ಯವಿದೆ. ರಾತ್ರಿ ವೇಳೆ ಸಹಜ ರಸ್ತೆ ಎಂದು ಸಂಚರಿಸಿ ಸಿಕ್ಕಿಕೊಳ್ಳುತ್ತಿದ್ದರೆ. ಕೃಷ್ಣಗಿರಿ ಕಾಲೋನಿ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಗೆ ಸಂಚರಿಸುವರಿಗೆ ತೊಂದರೆ ಆಗಿದೆ. ಈ ದುಸ್ಥಿತಿಯ ಚರಂಡಿ ಸ್ಲ್ಯಾಬ್ ಮರು ದುರಸ್ಥಿಯ ಬಗ್ಗೆ ಪುರಸಭೆಗೆ ಮನವಿ ಮಾಡಬೇಕೋ? ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಲ್ಲಿಸಬೇಕೋ? ಜನರು ಗೊಂದಲ ಎದುರಿಸುವಂತಾಗಿದೆ.

ಇದನ್ನೂ ಓದಿ: ಮಂಗಳೂರು-ಮೂಡುಬಿದಿರೆ “ಕುಡಿಯುವ ನೀರಿನ ಯೋಜನೆಗೆ” ಬೇಕು ವೇಗ

Advertisement

Udayavani is now on Telegram. Click here to join our channel and stay updated with the latest news.

Next