Advertisement

Kushtagi : 1 ರೂ.ಸಿಹಿ ತಿನಿಸಿಗೆ ಮೂರು ವರ್ಷದ ಬಾಲಕ ಬಲಿ

04:30 PM Apr 29, 2023 | Team Udayavani |

ಕುಷ್ಟಗಿ:1 ರೂ. ಸಿಹಿ ತಿನಿಸಿಗೆ ಮೂರು ವರ್ಷದ ಬಾಲಕ ಬಲಿಯಾಗಿದ್ದಾನೆ. ಮಕ್ಕಳ ಸಿಹಿ ತಿನಿಸು ಹೆಬ್ಬೆರೆಳು ಗಾತ್ರದ ಜೇಮ್ಸ್ ಗಾಜಿನ ಬಾಟಲಿ ಗಂಟಲಲ್ಲಿ‌ ಸಿಲುಕಿ ಅಕಾಲಿಕ ಸಾವೀಗೀಡಾದ ಹೃದಯವಿದ್ರಾವಕ ಘಟನೆ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ.

Advertisement

ಕುಷ್ಟಗಿ ವಾರ್ಡ್ ನಂ.8 ಮದಿನಾ ಗಲ್ಲಿಯ ನಿವಾಸಿ ರಬ್ಬಾನಿ ಬಾಗೇವಾಡಿ ಅವರ ಮಗ ಮಹ್ಮದ್ ಅಹ್ಮದ್ ರಬ್ಬಾನಿ ಬಾಗೇವಾಡಿ ಎಂದು ಗುರುತಿಸಲಾಗಿದೆ‌. ಬಾಲಕ 1ರೂ.ಗೆ ಸಿಹಿ ತಿನಿಸು ಜೇಮ್ಸ್‌ ಬಾಟಲಿ ಖರೀದಿಸಿದ್ದು ಅದರ ಮುಚ್ಚಳ ಬಾಯಿಂದ ತೆಗೆಯಲು ಯತ್ನಿಸಿದ ಸಂದರ್ಭದಲ್ಲಿ ಗಂಟಲಿನ ಅನ್ನನಾಳದಲ್ಲಿ ಅಡ್ಡ ಸಿಲುಕಿ ಅಸ್ವಸ್ಥಗೊಂಡಿದ್ದ. ಪಾಲಕರಿಗೆ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರಾದರೂ ಮಾರ್ಗ ಮದ್ಯೆ ಬಾಲಕ ಕೊನೆಯುಸಿರೆಳೆದಿದ್ದಾನೆ.

ಬಾಲಕನ ದುರಂತ ಸಾವಿಗೆ ಕುಟುಂಬ ವರ್ಗ ಕಂಗಾಲಾಗಿದೆ. ಅಡಿಕೊಂಡಿದ್ದ ಮಗು ಇನ್ನಿಲ್ಲವಾಗಿರುವುದು ಕುಟುಂಬ ವರ್ಗಕ್ಕೆ ಬರಸಿಡಿಲು ಬಡಿದಂತಾಗಿದೆ.

ಕೇವಲ ಒಂದು ರೂಪಾಯಿಗೆ ಸಿಗುವ ಜೆಮ್ಸ್ ಮಕ್ಕಳಿಗೆ ಆಕರ್ಷವಾಗುತ್ತಿದ್ದು ಇದನ್ನು ತಿನ್ನಲು ಆಸೆ ಪಡುವ ಮಕ್ಕಳು ಈ ರೀತಿ ದುರ್ಮರಣಕ್ಕೀಡಾಗಿರುವುದು ವಿಷಾದಕರ ಸಂಗತಿ‌ ಇಂತಹ ಸಿಹಿ ತಿನಿಸು, ಗುಣಮಟ್ಟ ರಹಿತ ತಿನಿಸನ್ನು ಬ್ಯಾನ್ ಮಾಡಬೇಂದು ವಾರ್ಡ್ ಸದಸ್ಯ ಸಯ್ಯದ್ ಖಾಜಾ ಮೈನುದ್ದೀನ್ ಮುಲ್ಲಾ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next