Advertisement

Kushtagi: ಕಳೆದೆರೆಡು ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಕೋತಿ ಸೆರೆ

12:05 PM Jun 30, 2024 | Team Udayavani |

ಕುಷ್ಟಗಿ: ಕಳೆದೆರೆಡು ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಕೋತಿಯನ್ನು ಅರಣ್ಯ ಇಲಾಖೆ ಕಡೆಗೂ ಬೋನಿನಲ್ಲಿ ಸೆರೆಯಾಗಿಸಿದ್ದು, ಗ್ರಾಮಸ್ಥರ ಆತಂಕ ನಿವಾರಿಸಿದೆ.

Advertisement

ನೀರಲೂಟಿ ಗ್ರಾಮದಲ್ಲಿ ಕಂಡ ಕಂಡವರಿಗೆ ಕಚ್ಚುತ್ತಿದ್ದ ಕೋತಿ 15ಕ್ಕೂ ಅಧಿಕ ಜನರನ್ನು ಗಾಯಗೊಳಿಸಿತ್ತು. ಸ್ಥಳೀಯರು ಕೋಲು ಹಿಡಿದು ಕೋತಿ ಹುಡುಕಿದರೂ ಸಂಜೆಯಾದರೂ ಸಿಕ್ಕಿರಲಿಲ್ಲ.

ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಪ್ರಭಾರಿ ವಲಯ ಅರಣ್ಯಾಧಿಕಾರಿ ರಿಯಾಜ್ ಅಹ್ಮದ್ ಕೋತಿ ಸೆರೆ ಹಿಡಿಯಯಲು ಬೋನಿನ ವ್ಯವಸ್ಥೆ ಮಾಡಿದ್ದು, ಈ ಹಿನ್ನೆಲೆ ಸಂಜೆ ಕೋತಿ ಬೋನಿನಲ್ಲಿ ಬಂಧಿಯಾಗಿದ್ದು, ಈ ಕೋತಿಗೆ ಚಿಕಿತ್ಸೆ ನೀಡಿ ಬೇರೆ ಅರಣ್ಯ  ಪ್ರದೇಶಕ್ಕೆ ರವಾನಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅರಣ್ಯಾಧಿಕಾರಿ ರಿಯಾಜ್ ತಿಳಿಸಿದರು.

ಕೋತಿಯ ಉಪಟಳದ ಬಗ್ಗೆ ಲೋಕೋಪಯೋಗಿ ಇಲಾಖೆಯ ಸರ್ಕ್ಯೂಟ್‌ ಹೌಸ್ ನಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪ್ರಸ್ತಾಪ ವ್ಯಕ್ತವಾಯಿತು. ಶಾಸಕ ದೊಡ್ಡನಗೌಡ ಪಾಟೀಲ ಹುಚ್ಚು ಕೋತಿಯನ್ನು ಸೆರೆ ಹಿಡಿಯುವ ಕುರಿತು ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಿದರು. ಇದೇ ವೇಳೆ ಮಾಲಗಿತ್ತಿ ಪ್ರದೇಶದಲ್ಲಿ ಚಿರತೆ ಓಡಾಡಿಕೊಂಡಿದ್ದು, ಚಿರತೆಗೆ ಹೆದರಿದ ಕೋತಿಗಳ ತಂಡ ಊರಿಗೆ ನುಗ್ಗಿ ತೊಂದರೆ ನೀಡುತ್ತಿವೆ. ಅಂತಹ ಕೋತಿಗಳನ್ನು ಸ್ಥಳೀಯ ಸಂಸ್ಥೆ ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕೆಂದು ಚರ್ಚಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next