Advertisement

Kushtagi: ಮನೆ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

07:49 AM Jun 30, 2024 | Team Udayavani |

ಕುಷ್ಟಗಿ: ಪಟ್ಟಣದ 1ನೇ ವಾರ್ಡಿನ ಕೃಷ್ಣಗಿರಿ ಕಾಲೋನಿಯಲ್ಲಿ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಮನೆಯ ಮುಂದೆ‌ ನಿಲ್ಲಿಸಿದ್ದ ಹೊಂಡಾ ಎಕ್ಟೀವಾ ಸ್ಕೂಟಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಪ್ರಕರಣ ನಡೆದಿದೆ.

Advertisement

ಕುಮಾರ ರಾಠೋಡ್ ಅವರಿಗೆ ಸೇರಿದ ಹೊಂಡಾ ಎಕ್ಟೀವಾ ಸ್ಕೂಟಿಯನ್ನು ಎಂದಿನಂತೆ ಮನೆಯ ಮುಂದೆ ನಿಲ್ಲಿಸಿದ್ದರು. ಬೆಳಗಿನ ಜಾವ 5 ಗಂಟೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.

ಧಗಧಗನೇ ಹೊತ್ತಿ ಉರಿಯುವ ವೇಳೆ ಭಾರಿ ಶಬ್ದಕ್ಕೆ ಅಕ್ಕಪಕ್ಕದವರಿಗೆ ಎಚ್ಚರವಾಯಿತು. ಕೂಡಲೇ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದು, ಅಗ್ನಿಶಾಮಕ ವಾಹನ ಆಗಮಿಸಿ ಬೆಂಕಿ ನಂದಿಸಿತು. ಆ ಸಮಯಕ್ಕಾಗಲೇ ಹೊಂಡಾ ಎಕ್ಟೀವಾ ಸ್ಕೂಟಿ ಸುಟ್ಟು ಸಂಪೂರ್ಣ ಕರಕಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next