Advertisement

ಕುಷ್ಟಗಿ: ಶಾಲೆಗೆ ಬಡಿದ ಸಿಡಿಲು; ತಪ್ಪಿದ ಸಂಭವನೀಯ ಆಘಾತ

09:16 PM Jul 17, 2022 | Team Udayavani |

ಕುಷ್ಟಗಿ: ತಾಲೂಕಿನ ಕೊಡತಗೇರಾ ಗ್ರಾಮದಲ್ಲಿ ಸಿಡಿಲು ಶಾಲೆಗೆ ಅಪ್ಪಳಿಸಿದ್ದು ಶಾಲೆಯಲ್ಲಿ ಕುಳಿತವರಿಗೆ ತರಚುಗಾಯಗಳಾಗಿವೆ. ಗುಡುಗು ಸಿಡಿಲಿಬ್ಬರದ ಮಳೆಯ ಸಂದರ್ಭದಲ್ಲಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲ ಮಳೆಯಿಂದ ರಕ್ಷಣೆಗಾಗಿ ನಿಂತಿದ್ದರು. ಈ ವೇಳೆ ಶಾಲೆಗೆ ಸಿಡಿಲು ಅಪ್ಪಳಿಸಿದ್ದು, ಇದರ ರಭಸಕ್ಕೆ ಕಟ್ಟಡದ ಚೂರುಗಳು, ಕಲ್ಲಪ್ಪ ಮಂಗಳಪ್ಪ ಪೂಜಾರ, ಮಲ್ಲಪ್ಪ ಹೋಬಳಪ್ಪ ಗೌಡರ್, ಹನಮಪ್ಪ ಬಾಳಪ್ಪ ಪಿಳಿಬಂಟರ್ ಎಂಬುವರಿಗೆ ಸಿಡಿದು ತರಚುಗಾಯವಾಗಿದೆ.

Advertisement

ಭಾನುವಾರ ಶಾಲೆ ರಜಾ ದಿನವಾಗಿದ್ದರಿಂದ ಮಕ್ಕಳಿಗೆ ಸಂಭವನೀಯ ಆಘಾತ ತಪ್ಪಿದಂತಾಗಿದೆ. ಹನುಮಸಾಗರ ಪಿಎಸೈ ಅಶೋಕ ಬೇವೂರು ಪ್ರತಿಕ್ರಿಯಿಸಿ, ಶಾಲೆಗೆ ಸಿಡಿಲು ಅಪ್ಪಳಿಸಿದ್ದು, ಒಂದಿಬ್ಬರಿಗೆ ಗಾಯವಾಗಿದ್ದು, ಯಾರೀಗೂ ಗಂಭೀರ ಪ್ರಮಾಣದ ಗಾಯ ಆಗಿಲ್ಲ ಅಪಾಯದಿಂದ ಪಾರಾಗಿದ್ದಾರೆ.

ಕೊಡತಗೇರಾದಲ್ಲಿ ಈ ಪ್ರಕರಣ ಬೆಚ್ಚಿ ಬೀಳಿಸಿದೆ.ಒಂದು ವೇಳೆ ಶಾಲೆ ನಡೆಯುತ್ತಿದ್ದರೆ ಭಾರೀ ಅನಾಹುತವಾಗಿರುತ್ತಿತ್ತು. ರಜಾ ದಿನ ಅಪಾಯದಿಂದ ಪಾರು ಮಾಡಿದೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next