Advertisement

ಕುಷ್ಟಗಿ: ತಲೆ ಮೇಲೆ ಬಸ್‌ ಹರಿದು ವ್ಯಕ್ತಿ ಸ್ಥಳದಲ್ಲೇ ಸಾವು

10:09 AM Feb 22, 2023 | Team Udayavani |

ಕುಷ್ಟಗಿ: ತಾವರಗೇರಾ ಪಟ್ಟಣದ ಬಳಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹರಿದು ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಫೆ.22ರ ಬುಧವಾರ ಬೆಳಗ್ಗೆ ಸಂಭವಿಸಿದೆ.

Advertisement

ವ್ಯಕ್ತಿ ಕಲಮಂಗಿ ಮೂಲದವರು ಎಂದು ಹೇಳಲಾಗುತ್ತಿದೆ.

ಸಿಂಧನೂರು ಡಿಪೋ ಬಸ್ಸು ತಾವರಗೇರಾ ಮಾರ್ಗವಾಗಿ ಕುಷ್ಟಗಿ ಕಡೆ ಹೊರಟಿತ್ತು.  ತಾವರಗೇರಾ ಬಸ್ ನಿಲ್ದಾಣದ ಕೂಗಳತೆಯಲ್ಲಿರುವ ಸಿಂಧನೂರು ಕ್ರಾಸ್ ನಲ್ಲಿ   ಪ್ರಯಾಣಿಕನನ್ನು ಇಳಿಸಿ ಬಸ್ಸು ಮುಂದೆ ಸಾಗಿದ ಸಂದರ್ಭದಲ್ಲಿ ವ್ಯಕ್ತಿ ಆಯತಪ್ಪಿ ಹಿಂದಿನ ಗಾಲಿಗೆ ಬಿದ್ದಾಗ ವ್ಯಕ್ತಿಯ ತಲೆಯ ಮೇಲೆ ಗಾಲಿ ಹತ್ತಿದ್ದು, ತಲೆಯ ಭಾಗ ಚಪ್ಪಟೆಯಾಗಿ ಗುರುತು ಸಿಗದಂತಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪಿಎಸೈ ತಿಮ್ಮಣ್ಣ ನಾಯಕ ಸ್ಥಳಕ್ಕೆ ಬಂದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next