Advertisement

ಕುಷ್ಟಗಿ: ಅಕ್ಕ- ತಮ್ಮನಿಗೆ ಹುಚ್ಚು ನಾಯಿ ಕಡಿತ; ಗ್ರಾಮಸ್ಥರಲ್ಲಿ ಭೀತಿ

10:37 AM Dec 11, 2022 | Team Udayavani |

ಕುಷ್ಟಗಿ: ತಾಲೂಕಿನ ತೆಗ್ಗಿಹಾಳ ಗ್ರಾಮದಲ್ಲಿ ಭಾನುವಾರ ಬೆಳ್ಳಂ ಬೆಳಗ್ಗೆ ಅಕ್ಕ- ತಮ್ಮನಿಗೆ ಹುಚ್ಚು ನಾಯಿ ಕಡಿದು ಗಾಯಗೊಳಿಸಿದ್ದು, ಗ್ರಾಮದಲ್ಲಿ ಆತಂಕ ಮೂಡಿಸಿದೆ.

Advertisement

ಬಾಲಕ ನಾಗರಾಜ ಕತ್ತಿ ಹಾಗೂ ಅವರ ಅಕ್ಕ ಮಲ್ಲಮ್ಮ ಎಂಬವರಿಗೆ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿದೆ.

ಬಹಿರ್ದೆಸೆಗೆ ಹೋಗಿ ಬರುತ್ತಿದ್ದ ನಾಗರಾಜನಿಗೆ ನಾಯಿ ಹಿಂದಿನಿಂದ ಬಂದು ಕಚ್ಚಿದ್ದು, ಇದನ್ನು ತಡೆಯಲು ಹೋದ ಅಕ್ಕ ಮಲ್ಲಮ್ಮಳ ಕೈಗೂ ಬಲವಾಗಿ ಕಚ್ಚಿದೆ. ಇದಕ್ಕೂ ಮುನ್ನ ಮುತ್ತಣ್ಣ ಕುರಿ ಎಂಬವರ ಸಾಕು ನಾಯಿ ಮರಿಯನ್ನು‌ ಕಚ್ಚಿ ಗಾಯಗೊಳಿಸಿರುವುದು ಗ್ರಾಮದಲ್ಲಿ ಆತಂಕಕ್ಕೀಡು ಮಾಡಿದೆ.

ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ ಹುಚ್ಚು ನಾಯಿ ಕಣ್ಮರೆಯಾಗಿದ್ದು, ಸ್ಥಳೀಯರು ಹುಡುಕಾಟ ತೀವ್ರಗೊಳಿಸಿದ್ದಾರೆ. ಗಾಯಗೊಂಡವರನ್ನು ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next