Advertisement

ಬೈಕ್ ಗೆ ಕಾರು ಢಿಕ್ಕಿ: ಮೂವರು ಸವಾರರಿಗೆ ಗಾಯ ; ಮಾನವೀಯತೆ ಮೆರೆದ ತಹಶೀಲ್ದಾರ್

07:33 PM Mar 02, 2023 | Team Udayavani |

ಕುಷ್ಟಗಿ: ಇಲ್ಲಿನ ತಹಶೀಲ್ದಾರ ಕಚೇರಿ ಸಮೀಪ ಗುರುವಾರ ಸಂಜೆ ಕಾರು ಢಿಕ್ಕಿಯಾಗಿ ಬೈಕ್ ಸವಾರ ಮೂವರು ಯುವಕರಿಗೆ ಗಾಯ ಗೊಂಡಿದ್ದಾರೆ. ಗಾಯಾಳುಗಳು ನರಳಾಡುವ ಸಂದರ್ಭದಲ್ಲಿ ಕುಷ್ಟಗಿ ತಹಶೀಲ್ದಾರ ಅವರು, ತಮ್ಮ ಜೀಪಿನಲ್ಲಿ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.

Advertisement

ಮೂವರು ಯುವಕರು ಚಳಗೇರಾದಿಂದ ಒಂದೇ ಬೈಕಿನಲ್ಲಿ ಸ್ವಗ್ರಾಮಕ್ಕೆ ಹೊರಟಿದ್ದರು. ಇದೇ ವೇಳೆ ಕಾರು ಚಾಲಕನ ನಿರ್ಲಕ್ಷ ಚಾಲನೆಯಿಂದ ಮುಂದೆ ಹೋಗುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಾಗ ಬಿದ್ದು ಗಾಯಗೊಂಡಿದ್ದಾರೆ. 108 ವಾಹನ ಬರಲು ವಿಳಂಭವಾಗಿದೆ. ಅದೇ ವೇಳೆ ನಿಡಶೇಸಿ ಗ್ರಾಮಕ್ಕೆ ಸ್ಥಳದ ಸ್ಥಾನಿಕ ಪರಿಶೀಲನೆಗೆ ಹೊರಟಿದ್ದ ತಹಶೀಲ್ದಾರ ಕೆ. ರಾಘವೇಂದ್ರರಾವ್ ಅವರು, ಕೂಡಲೇ ತಮ್ಮ ಜೀಪಿನಲ್ಲಿ ಮೂವರು ಗಾಯಾಳುಗಳನ್ನು ಕುಷ್ಟಗಿ ತಾಲೂಕಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆಗೆ ಕರೆದೊಯ್ಯಲಾಗಿದೆ.

ಮೂವರು ಯುವಕರು ಹುಲಿಯಾಪೂರ ಗ್ರಾಮದ ರಾಜೇಸಾಬ್ ಯಮನೂರಸಾಬ್ ತಾವರಗೇರಾ, ಕಾಶೀಂಸಾಬ್ ಚಂದುಸಾಬ್ ಬೋಗಾಪೂರ ಹಾಗೂ ಕುಮಾರ ದೇವಪ್ಪ ಕಂಪ್ಲಿ ಎಂದು ಗುರುತಿಸಲಾಗಿದ್ದು, ಜೂಲಕಟ್ಟಿ ಗ್ರಾಮದ ಬಳಿ ಸರ್ಕಾರಿ ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗಿ ಸ್ವಗ್ರಾಮಕ್ಕೆ ವಾಪಸ್ಸಾಗುವ ವೇಳೆ ಈ ದುರ್ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next