Advertisement

Kushtagi: ನಿಂತಿದ್ದ ಲಾರಿಗೆ ಬೈಕ್‌ ಡಿಕ್ಕಿ; ಸವಾರ ಸಾವು; ಸಹಸವಾರನಿಗೆ ಗಾಯ

11:54 AM Aug 04, 2024 | Team Udayavani |

ಕುಷ್ಟಗಿ: ನಿಂತ ಲಾರಿಗೆ ಬೈಕ್ ಡಿಕ್ಕಿಯಾಗಿ ಯುವಕ ದುರ್ಮರಕ್ಕೀಡಾದ ಘಟನೆ ಯಲಬುರ್ಗಾ ತಾಲೂಕಿನ ಮಾಟಲದಿನ್ನಿ ಬಳಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಆ.3ರ ಶನಿವಾರ ಸಂಭವಿಸಿದೆ‌.

Advertisement

ತಾಲೂಕಿನ ಕುರಬನಾಳ ಗ್ರಾಮದ ನಿವಾಸಿ ಹನಮಂತ ಸಿದ್ದಪ್ಪ ಪೂಜಾರಿ (22) ಮೃತ ದುರ್ದೈವಿ.

ಹನಮಂತ ಅವರ ಅಳಿಯ (ಅಕ್ಕನ ಮಗ) ಶ್ರೀಕಾಂತ ನನ್ನು ಹಬ್ಬಕ್ಕೆಂದು ಬೈಕ್ ನಲ್ಲಿ ಕರೆದುಕೊಂಡು ಬರುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.

ಹನಮಂತ ಸ್ಥಳದಲ್ಲಿ ಮೃತಪಟ್ಟಿದ್ದು, ಅಳಿಯ ಶ್ರೀಕಾಂತ ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳದಿಂದ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ.

ಬೇವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next