Advertisement

ಭಾರತ ವಿರುದ್ಧದ ಟಿ20, ಏಕದಿನ ಸರಣಿಯಿಂದ ಕುಸಾಲ್ ಪೆರೇರ ಔಟ್: ವಿ.ಕೀಪರ್ ಹುಡುಕಾಟದಲ್ಲಿ ಲಂಕಾ

02:48 PM Jul 16, 2021 | Team Udayavani |

ಕೊಲಂಬೋ: ಭಾರತ ತಂಡದ ವಿರುದ್ಧ ಮುಂದಿನ ರವಿವಾರದಿಂದ ಆರಂಭವಾಗಲಿರುವ ಸೀಮಿತ ಓವರ್ ಗಳ ಸರಣಿಗೂ ಮೊದಲೇ ಲಂಕಾ ತಂಡಕ್ಕೆ ಹಿನ್ನಡೆಯಾಗಿದೆ. ಮಾಜಿ ನಾಯಕ, ವಿಕೆಟ್ ಕೀಪರ್ ಕುಸಾಲ್ ಪೆರೇರ ಸರಣಿಯಿಂದಲೇ ಹೊರಬಿದ್ದಿದ್ದಾರೆ.

Advertisement

ಭುಜದ ನೋವಿನಿಂದಾಗಿ ಕುಸಾಲ್ ಪೆರೇರಾ ಏಕದಿನ ಮತ್ತು ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ವೇಗಿ ಬಿನೂರ ಫರ್ನಾಂಡೋ ಕೂಡಾ ಏಕದಿನ ಸರಣಿಯಿಂದ ಗಾಯದ ಸಮಸ್ಯೆಯ ಕಾರಣ ಹೊರಬಿದ್ದಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೇಳಿಕೆ ನೀಡಿದೆ.

ಇದನ್ನೂ ಓದಿ:ಪಂತ್, ಸಾಹ ಐಸೋಲೇಶನ್ ನಲ್ಲಿ, ವಿಕೆಟ್ ಕೀಪಿಂಗ್ ಗೆ ನಾನು ರೆಡಿ ಎಂದ ದಿನೇಶ್ ಕಾರ್ತಿಕ್

ಕುಸಾಲ್ ಪೆರೇರಾ ಸರಣಿಯಿಂದ ಹೊರಬಿದ್ದ ಕಾರಣ ಲಂಕಾ ತಂಡಕ್ಕೆ ವಿಕೆಟ್ ಕೀಪಿಂಗ್ ತಲೆನೋವಾಗಿದೆ. ಮತ್ತೋರ್ವ ವಿಕೆಟ್ ಕೀಪರ್ ನಿರೋಶನ್ ಡಿಕವೆಲ್ಲಾ ಅವರು ಇಂಗ್ಲೆಂಡ್ ನಲ್ಲಿ ಬಯೋ ಬಬಲ್ ನಿಯಮ ಉಲ್ಲಂಘಿಸಿದ ಕಾರಣ ಶಿಕ್ಷೆ ಅನುಭವಿಸುತ್ತಿದ್ದಾರೆ.

ಜು.18ರಿಂದ ಭಾರತ ಮತ್ತು ಶ್ರೀಲಂಕಾ ಏಕದಿನ ಸರಣಿ ಆರಂಭವಾಗಲಿದೆ. ಮೂರು ಏಕದಿನ ಪಂದ್ಯಗಳ ಬಳಿಕ ಮೂರು ಟಿ20 ಪಂದ್ಯಗಳು ನಡೆಯಲಿದೆ. ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸಿದರೆ, ಲಂಕಾ ತಂಡವನ್ನು ಆಲ್ ರೌಂಡರ್ ದಸುನ್ ಶನಕಾ ಮುನ್ನಡೆಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next