Advertisement

ವಿದ್ಯುತ್‌ ಕ್ಷೇತ್ರ ಖಾಸಗೀಕರಣ ಕೈಬಿಡಿ

04:32 PM Jun 03, 2020 | Naveen |

ಕುರುಗೋಡು: ವಿದ್ಯುತ್‌ ಕ್ಷೇತ್ರದಲ್ಲಿ ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನೌಕರ ಸಂಘ ನೇತೃತ್ವದಲ್ಲಿ ಮತ್ತು ವಿವಿಧ ಕಾರ್ಮಿಕ ಸಂಘಟನೆಗಳ ಬೆಂಬಲದೊಂದಿಗೆ ಕಪ್ಪು ಪಟ್ಟಿ ಧರಿಸಿ ಪಟ್ಟಣದ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

Advertisement

ಪ್ರಾಂತ ರೈತಸಂಘದ ಜಿಲ್ಲಾಧ್ಯಕ್ಷ ವಿಎಸ್‌. ಶಿವಶಂಕರ್‌ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ವಿದ್ಯುತ್ಛಕ್ತಿ ತಿದ್ದುಪಡಿ ಮಸೂದೆ-2020ನ್ನು ರಾಜ್ಯದಲ್ಲಿ ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು. ಒಂದು ವೇಳೆ ಜಾರಿಯಾದರೆ ಭಾಗ್ಯಜ್ಯೋತಿ, ಕುಟೀರಜ್ಯೋತಿ, ವಿದ್ಯುತ್‌ ಉತ್ಪಾದನೆ ಸರಬರಾಜು ಲಕ್ಷಾಂತರ ಕೋಟಿ ಆಸ್ತಿ-ಪಾಸ್ತಿಗಳು ಖಾಸಗಿ ಲೂಟಿಕೋರರ ಕಾರ್ಪೋರೇಟರ್‌ ಕಂಪನಿಗಳ ಕೈವಶವಾಗಲಿವೆ ಎಂದು ಆರೋಪಿಸಿದರು.

ಪಂಪಸೆಟ್‌ ರೈತರಿಗೆ, ಜೆಸ್ಕಾಂ ನೌಕರರಿಗೆ ಭಾರಿ ಪೆಟ್ಟು ಬಿದ್ದಂತಾಗುತ್ತದೆ ಎಂದರು. ಕುರುಗೋಡು ಜೆಸ್ಕಾಂ ಕಚೇರಿ ಮೇಲ್ವಿಚಾರಕ ಡಿ. ಪೊಂಪಾಪತಿ, ರಸ್ತೆಬದಿ ವ್ಯಾಪಾರ ಸಂಘದ ಮುಖಂಡ ಎಚ್‌.ಎಂ. ವಿಶ್ವನಾಥಸ್ವಾಮಿ ಪ್ರತಿಭಟನೆಗೆ ಬೆಂಬಲ ನೀಡಿ ಮಾತನಾಡಿದರು. ಜೆಸ್ಕಾಂ ಕಚೇರಿ ಕಾರ್ಮಿಕ ಮುಖಂಡ ಶೆಕ್ಷಾವಲಿ ಸ್ವಾಗತಿಸಿ, ವಂದಿಸಿದರು. ಪ್ರಾಂತ ರೈತ ಸಂಘದ ಮುಖಂಡ ಗಾಳಿ ಬಸವರಾಜ್‌, ಕೆಂಚಪ್ಪ, ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ಕುರುಗೋಡು ನೌಕರಸಂಘ ಎಇ ಹರಿಕೃಷ್ಣ, ಹಿರಿಯ ಮುಖಂಡ ತಿಮ್ಮಪ್ಪ, ವಸಂತ, ಗೊಡ್ಲೆಪ್ಪ, ಶಾಂತವಿರಯ್ಯಸ್ವಾಮಿ, ಎಸ್‌ಕೆ. ಶ್ವೇತಾ, ವೆಂಕಟಲಕ್ಷ್ಮೀ, ಗೀತಾ, ರಾಧಾಕೃಷ್ಣ, ವೀರೇಶ್‌, ಗಂಗಾಧರ್‌, ಕೆಂಚಪ್ಪ, ಸಲೀಮ್ ಬಾಷ, ಮಾಭಾಷ, ಬಸವರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next