Advertisement

ಗುರುಗ್ರಾಮ : ವಿದ್ಯಾರ್ಥಿ ಹತ್ಯೆ ಪ್ರಕರಣ, ಇಬ್ಬರ ಬಂಧನ

09:26 AM Sep 11, 2017 | Team Udayavani |

ಗುರುಗ್ರಾಮ:  ಇಲ್ಲಿನ ರಯಾನ್‌ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ಶುಕ್ರವಾರ ನಡೆದ 2ನೇ ತರಗತಿ ವಿದ್ಯಾರ್ಥಿ ಪ್ರಧುಮನ್‌ನ ಭೀಕರ ಹತ್ಯೆಗೆ ಸಬಂಧಿಸಿದಂತೆ ಸೋಮವಾರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆಂದು  ಮಾಧ್ಯಮ ವರದಿ ತಿಳಿಸಿದೆ.

Advertisement

ಆಡಳಿತ ಮಂಡಳಿಯ ಸಂಚಾಲಕ ಹಾಗೂ ರಿಜಿನಲ್‌ ಮ್ಯಾನೇಜರ್‌ನ್ನು ಪೊಲೀಸರು ಬಂಧಿಸಿದ್ದು, ಇಂದು  ಕೋರ್ಟ್‌ಗೆ ಹಾಜರು ಪಡಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಹತ್ಯೆ ಖಂಡಿಸಿ ಭಾನುವಾರ ಶಾಲಾ ಆವರಣ ಮತ್ತು ನಗರದಲ್ಲಿ ಭಾರೀ ಸಂಖ್ಯೆಯ ಜನರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದರು. ಶುಕ್ರವಾರ ಬೆಳಗ್ಗೆ 8.30ರ ವೇಳೆಗೆ ಬಾಲಕ ಪ್ರಧುಮನ್‌ನ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ಟಾಯ್ಲೆಟ್‌ನಲ್ಲಿ ಪತ್ತೆಯಾಗಿತ್ತು. ತನಿಖೆ ನಡೆಸಿದ ಪೊಲೀಸರು ಶಾಲಾ ಬಸ್‌ ಕಂಡಕ್ಟರ್‌  ಅಶೋಕ್‌ ಕುಮಾರ್‌ನನ್ನು ವಶಕ್ಕೆಪಡೆದಿದ್ದು, ಲೈಂಗಿಕ ದೌರ್ಜನ್ಯ ನಡೆಸಲು ಹೋಗಿ ಮಗುವನ್ನು ಕೊಂದಿದ್ದಾಗಿ ಆತ ಬಾಯ್‌ ಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next